ತ್ಯಾಗ – ಬಲಿದಾನದ ಸಂಕೇತವೇ ಈ ಹಬ್ಬ ; ಸಿದ್ದರಾಮಯ್ಯ
ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾದ ಸಿಎಂ ಸಿದ್ದರಾಮಯ್ಯ, ಮುಸ್ಲಿಂ ಬಂಧುಗಳಿಗೆ ಬಕ್ರೀದ್ ಹಬ್ಬದ ಶುಭಾಶಯ ಕೋರಿದರು.
ನಾವೆಲ್ಲರು ಮನುಷ್ಯರು, ಪರಸ್ಪರ ಪ್ರೀತಿಯಿಂದ ಇರಬೇಕು. ಕೆಲವು ಶಕ್ತಿಗಳು ಬೇಕು ಅಂತಾ ಅಹಿತಕರ ಮಾಡುತ್ತೇವೆ.
ನಾವು ಸೊಪ್ಪು ಹಾಕಲು ಹೋಗಬಾರದು. ಎಲ್ಲರು ಪ್ರೀತಿಯಿಂದ ಇದ್ದರೆ ರಾಜ್ಯನು ಅಭಿವೃಧ್ಧಿ ಆಗುತ್ತದೆ. ಪ್ರೀತಿ ವಿಶ್ವಾಸದ ಮನಸ್ಸು ಎಲ್ಲರಿಗೆ ಬರಬೇಕು. ಇಂದು ಪ್ರಾರ್ಥನೆ ಮಾಡಿ ಮನುಕುಲಕ್ಕೆ ಒಳ್ಳೆಯದಾಗಲಿ ಎಂದು ಕೇಳಿಕೊಂಡಿದ್ದೀರಿ ಎಂದರು.
ಬಕ್ರೀದ್ ಪ್ರಯುಕ್ತ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ವಸತಿ ಸಚಿವ ಜಮೀರ್ ಅಹಮದ್ ಸೇರಿ ಸಮುದಾಯದ ಮುಖಂಡರು, ಹಿರಿಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.