ಎತ್ತಿನಗಾಡಿ ಓಟದ ಸ್ಪರ್ಧೆ: ವೀಕ್ಷಕರ ಮೇಲೆ ಹರಿದ ಎತ್ತಿನಗಾಡಿ ರೈತ ಸಾವು

0

ಮಂಡ್ಯ: ಮಂಡ್ಯ ಜಿಲ್ಲೆಯ ಚಿಕ್ಕ ಮಂಡ್ಯ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಅಂತರ ರಾಜ್ಯ ಮಟ್ಟದ ಎತ್ತಿನಗಾಡಿ ಓಟದಸ್ಪರ್ಧೆಯ ವೇಳೆ ವೀಕ್ಷಣೆಗೆ ಆಗಮಿಸಿದ್ದ ವ್ಯಕ್ತಿಯ ಮೇಲೆ ಎತ್ತಿನ ಗಾಡಿ ಹರಿದು ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಕಳೆದ ಎರೆಉ ದಿನಗಳಿಂದ ಅಂತರರಾಜ್ಯ ಮಟ್ಟದ ಎತ್ತಿನಗಾಡಿ ಓಟದ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು . ಈ ವೇಳೆ ಎತ್ತಿನಗಾಡಿ ಸ್ಪರ್ಧೆ ವೀಕ್ಷಣೆಗೆ ಆಗಮಿಸಿದ್ದ ಮಂಡ್ಯ ತಾಲೂಕಿನ ಕೀಲಾರ ಗ್ರಾಮದ ವ್ಯಕ್ತಿಯ ಮೇಲೆ ವೇಗವಾಗಿ ಬಂದ ಎತ್ತಿನಗಾಡಿ ಹರಿದಿದೆ ಚಕ್ರಕ್ಕೆಸಿಲುಕಿಗಂಭೀರವಾಗಿಗಹಾಯಗೊಂಡವ್ಯಕ್ತಿಸ್ಥಳದಲ್ಲಿಯೇಸಾವನ್ನಪ್ಪಿದ್ದಾನೆ. ಮತ್ತೊಬ್ಬವ್ಯಕ್ತಿಯುಎತ್ತುಗಳತುಳಿತಕ್ಕೆಒಳಗಾಗಿದ್ದು, ಗಂಭೀರವಾಗಿಗಾಯಗೊಂಡಿದ್ದಾನೆ.

ಈಅವಘಡದಲ್ಲಿಬಾಲಕನೊಬ್ಬನಿಗೂಗಂಭೀರಗಾಯವಾಗಿದೆಎಂದುತಿಳಿದುಬಂದಿದೆ. ಎತ್ತಿನಗಾಡಿ ಓಟದಸ್ಪರ್ಧೆಯ ವೀಕ್ಷಣೆಗೆಂದು ಸಾವನ್ನಪಿದವ್ಯಕ್ತಿಯನ್ನು ಕೀಲಾರಗ್ರಾಮದ ನಾಗರಾಜು(42) ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡಿರುವ ಯುವಕನನ್ನು ಮಂಡ್ಯ ತಾಲೂಕಿನ ಹುಲಿವಾನಗ್ರಾಮದವನು ಎಂದು ಗುರುತಿಸಲಾಗಿದೆ. ಗಾಯಾಳುವನ್ನುಮಂಡ್ಯಮಿಮ್ಸ್ಆಸ್ಪತ್ರೆಗೆದಾಖಲಿಸಿಚಿಕಿತ್ಸೆಕೊಡಿಸಲಾಗುತ್ತಿದೆ. ಘಟನೆ ಸಂಬಂಧ ಮಂಡ್ಯ ಸೆಂಟ್ರಲ್ಪೊಲೀಸ್ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

 

About Author

Leave a Reply

Your email address will not be published. Required fields are marked *

You may have missed