ಕರ್ನಾಟಕ ಅಂದ್ರೆ ಮೋದಿ ನೇತೃತ್ವದ ಸರ್ಕಾರಕ್ಕೆ ಗೌರವ ಇಲ್ಲ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
ಬೆಂಗಳೂರು: ಕರ್ನಾಟಕ ಅಂದ್ರೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಗೌರವ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಸಂಬಂಧ ಸದಾಶಿವ ನಗರದಲ್ಲಿ ಮಾತನಾಡಿದ ಅವರು, ಮಹದಾಯಿ ವಿಚಾರದಲ್ಲಿ ರಾಜ್ಯದ ಸಮಸ್ಯೆಗಳ ಕುರಿತು ಡೆಲಿಗೇಷನ್ ಬಳಸಿಕೊಂಡು ಮಾತನಾಡಬಹುದಲ್ಲ?.
ಎಸ್ಸಿ ಮೀಸಲಾತಿಯನ್ನು 9ನೇ ಶೆಡ್ಯುಲ್ನಲ್ಲಿ ಸೇರಿಸೋದಕ್ಕೆ ಆಗ್ತಿಲ್ಲ. ಯಾವ ರೀತಿ ದಲಿತರಿಗೆ ಮೋಸ ಮಾಡ್ತಿದ್ದಾರೆ ಎಂದು ಅರ್ಥ ಆಗ್ತಿದೆ.
ಡಬಲ್ ಇಂಜಿನ್ ಸರ್ಕಾರವನ್ನು ಕಿತ್ತೊಗೆಯಬೇಕು, ಇದರಿಂದ ರಾಜ್ಯಕ್ಕೆ ದೊಡ್ಡ ಅನ್ಯಾಯ ಆಗ್ತಿದೆ ಎಂದರು. ನಾ ನಾಯಕಿ ಕಾರ್ಯಕ್ರಮ ಮುಂದಕ್ಕೆ ಹೋಗಿದೆ. ಇದೇ ತಿಂಗಳ 16ಕ್ಕೆ ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಯಲಿದೆ. ರಾಷ್ಟ್ರೀಯ ನಾಯಕರು ಯಾರು ಬರ್ತಾರೆ ಅಂತಾ ಇಂದು ಗೊತ್ತಾಗಲಿದೆ. ಮೈತಿ ಬೂತ್ ನಿಂದ ಮಹಿಳಾ ಕಾರ್ಯಕರ್ತರ ಆಹ್ವಾನ ಮಾಡ್ತಾ ಇದ್ದೇವೆ. ಮಹಿಳೆಯರುಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಕಾರ್ಯಕ್ರಮ ಮಾಡುತ್ತೇವೆ. ಸಮಾವೇಶ ಯಶಸ್ವಿ ಮಾಡಲು ನಾನು ಕೂಡ ಜೂಮ್ ಮೀಟಿಂಗ್ ಮಾಡ್ತಾ ಇದ್ದೇನೆ ಎಂದು ಹೇಳಿದ್ದಾರೆ.