ರಾಜ್ಯದಲ್ಲಿ ಬಿಜೆಪಿ ಬರಲ್ಲ ಅನ್ನೋದು ಮೋದಿಗೆ ಖಾತ್ರಿಯಾಗಿದೆ: ಡಿ.ಕೆ.ಶಿವಕುಮಾರ್

0

ಡುಪಿ: ರಾಜ್ಯದಲ್ಲಿ ನೆರೆ ಹಾನಿ ಬಂದು ಜನ ಕಷ್ಟದಲ್ಲಿದ್ದಾಗ ಮೋದಿ ಬರಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ಮಾಡಿದರು. 25 ಸಂಸದರಿದ್ದಾರೆ, ಅವರನ್ನು ಕರೆಸಿ ಒಂದು ದಿನ ಸಭೆ ಮಾಡಿಲ್ಲ. ರಾಜ್ಯದಲ್ಲಿ ಬಿಜೆಪಿ ಬರಲ್ಲ ಅನ್ನೋದು ಮೋದಿಗೆ ಖಾತ್ರಿಯಾಗಿದೆ.

ಎಲ್ಲಾ ವರದಿಗಳು ಬಿಜೆಪಿ ಸರ್ಕಾರ ಬರುವುದಿಲ್ಲ ಅಂತ ಹೇಳಿವೆ. ಕರ್ನಾಟಕದಲ್ಲಿ 65ಕ್ಕಿಂತ ಹೆಚ್ಚು ಸ್ಥಾನ ಬಿಜೆಪಿಗೆ ಬರುವುದಿಲ್ಲ. ನಮ್ಮ ಪಕ್ಷದ ಆಂತರಿಕ ವರದಿಗಳು ಹೇಳಿವೆ ಎಂದು ಡಿಕೆಶಿ ಹೇಳಿದರು.

ನಮ್ಮ ಕರ್ನಾಟಕಕ್ಕೆ ಮೋದಿಯವರ ಮುಖ ಯಾಕೆ ಬೇಕು? ಇಲ್ಲಿ ಆಡಳಿತ ಮಾಡುವವರ ಮುಖ ಮುಂದಿಟ್ಟು ಎದುರಿಸಲಿ. ಬಿಜೆಪಿ ಮೇಲೆ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಇನ್ನು 60 ದಿನ ಅಷ್ಟೇ ಈ ಸರ್ಕಾರ ಇರುತ್ತೆ. ಕೊನೆ ದಿನಗಳು ಬಂದಿವೆ, ಕೌಂಡ್​ಡೌನ್ ಶುರುವಾಗಿದೆ. ಫೆಬ್ರವರಿ 28ರಂದು ಬಿಜೆಪಿ ಸರ್ಕಾರ ಕ್ಲೋಸ್ ಆಗುತ್ತೆ. ಬಳಿಕ ರಾಜ್ಯದಲ್ಲಿ ಚುನಾವಣಾ ನೀತಿಸಂಹಿತೆ ಜಾರಿಯಾಗಲಿದೆ. 40 ದಿನದಲ್ಲಿ ಬಿಜೆಪಿಯವರು ಪ್ಯಾಕ್ ಮಾಡಿಕೊಂಡು ಹೋಗ್ತಾರೆ ಎಂದು ವಾಗ್ದಾಳಿ ಮಾಡಿದರು.

About Author

Leave a Reply

Your email address will not be published. Required fields are marked *

You may have missed