ನನಗೆ ಚಾಮರಾಜನಗರ ಜಿಲ್ಲೆಯಲ್ಲಿ ಶಾಸಕನಾಗಬೇಕೆಂಬ ಬಯಕೆ ಇದೆ: ಸಚಿವ ವಿ ಸೋಮಣ್ಣ
ಬೆಂಗಳೂರು: ಚಾಮರಾಜನಗರ ಜಿಲ್ಲೆಯಲ್ಲಿ ಶಾಸಕನಾಗಬೇಕೆಂಬ ಬಯಕೆ ಇದೆ ಎಂದು ವಸತಿ ಸಚಿವ ವಿ ಸೋಮಣ್ಣ ಹೇಳಿದ್ದಾರೆ. ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಉತ್ತರ ಸಣ್ಣ ಕೈಗಾರಿಕೆಗಳ ಸಂಘ ಹಮ್ಮಿಕೊಂಡಿದ್ದ ಬಾನ್ಸಿಯಾ ಭವನದ ನೂತನ ಕಟ್ಟಡ ಉದ್ಘಾಟನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಒಂದು ಸಲ ಚಾಮರಾಜನಗರ ಜಿಲ್ಲೆಯಲ್ಲಿ ಶಾಸಕರಾಗಬೇಕೆಂಬ ಬಯಕೆ ಇದೆ ಎಂದ ಅವರು ಇಂದೂ ಕೇಂದ್ರ ಸಚಿವ ಅಮಿತ್ ಷಾ ನಗರಕ್ಕೆ ಬಂದಿದ್ದಾರೆ ಅವರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದರು. ನಾನು 11 ಚುನಾವಣೆಯನ್ನು ಎದುರಿಸಿದ್ದೇನೆ ಎರಡು ಸಲ ಸೋತಿದ್ದೇನೆ ರಾಜಕಾರಣ ನಿಂತ ನೀರಲ್ಲ ಹರಿಯುವ ನೀರು ಐವರು ಮುಖ್ಯ ಮುಖ್ಯಮಂತ್ರಿ ಜೊತೆ ಕೆಲಸ ಮಾಡಿದ್ದೇನೆ ಮೂರು ಪ್ರಧಾನ ಮಂತ್ರಿಗಳ ಒಡನಾಟ ಇಟ್ಟುಕೊಂಡಿದ್ದವನು ಎಂದರು.
ಎಲ್ಲೋ ಹುಟ್ಟುತ್ತೇವೆ ಎಲ್ಲೋ ಬೆಳೆಯುತ್ತೇವೆ ಸಾವಿರಾರು ಜನ ಒಡನಾಟದಲ್ಲಿ ಇರುತ್ತೇವೆ ನನ್ನ ಮೇಲೆ ಪ್ರೀತಿ ವಿಶ್ವಾಸ ಇಟ್ಟು ಕೊಂಡಿರುವ ತಮ್ಮೆಲ್ಲರ ಋಣ ತೀರಿಸುತ್ತೇನೆ . ಬಾನ್ಸಿಯಾ ಭವನ ದ ಕಟ್ಟಡ ಅರ್ಧಕ್ಕೆ ನಿಂತಿದೆ ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದ್ದು ನೀತಿ ಸಂಹಿತೆ ಬರುತ್ತದೆ ಒಂದು ತಿಂಗಳು ವಿರಾಮವಾಗಿರುತ್ತೇನೆ ಅಷ್ಟರೊಳಗೆ ಈ ಕಟ್ಟಡವನ್ನು ಪೂರ್ತಿಗೊಳಿಸುತ್ತೇನೆ ಎಂದು ತಿಳಿಸಿದರು. ಕೆಂಪೇಗೌಡರ ಕಟ್ಟಿದ ಬೆಂಗಳೂರಿನಲ್ಲಿ ನಾವು ಜೀವನ ಮಾಡುತ್ತಿದ್ದೇವೆ ಇಂತಹ ನಾಡಿನಲ್ಲಿ ಒಳ್ಳೆಯತನ ಒಳ್ಳೆಯ ನಡವಳಿಕೆ ಬೆಳೆಸಿಕೊಂಡು ಬಾಳಬೇಕು ಬೆಂಗಳೂರು ನಗರದಂತಹ ನಗರ ದೇಶದಲ್ಲಿ ಇನ್ನೊಂದಿಲ್ಲ ಎಂಬುದು ನನ್ನ ಭಾವನೆ ಬೆಂಗಳೂರು ನಗರಕ್ಕೆ ಬಂದವರಿಗೆ ಕೆಲಸ ಕೊಡುವುದೆಂದರೆ ಹೋಟೆಲ್ ಇನ್ನೊಂದು ಸಣ್ಣ ಕೈಗಾರಿಕೆಗಳು ಎಂದು ತಿಳಿಸಿದರು.