ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೊದಲ ಧ್ಯೇಯ: ಸಚಿವ ಕೆ ಗೋಪಾಲಯ್ಯ

0

ಬೆಂಗಳೂರು: ಕ್ಷೇತ್ರದ ಅಭಿವೃದ್ಧಿಯೇ ನನ್ನ ಧ್ಯೇಯ ಎಂದು ಸಚಿವ ಕೆ ಗೋಪಾಲಯ್ಯ(Minister K Gopaliah) ಹೇಳಿದ್ದಾರೆ. ಮಹಾಲಕ್ಷ್ಮಿ ಲೇಔಟ್(Mahalakshmi Layout) ವಿಧಾನಸಭಾ ಕ್ಷೇತ್ರದ, ಮಾರಪ್ಪನಪಾಳ್ಯದ ಅಶೋಕ್ ಪುರಂನಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಸಭೆಯನ್ನು ನಡೆಸಿ.

ಅವರು ಮಾತನಾಡಿ, ಕ್ಷೇತ್ರದಲ್ಲಿನ ಮಳೆ ಬಂದಂತಹ ಸಂದರ್ಭದಲ್ಲಿ ನೂರಾರು ಮನೆಗಳಿಗೆ ನೀರು ಸೇರುತ್ತಿತ್ತು. ಅವುಗಳಿಗೆ ಸೂಕ್ತ ಕ್ರಮವನ್ನು ವಹಿಸಿ ಸರಿಪಡಿಸಲಾಗಿದೆ. ದೇವಸ್ಥಾನಗಳ ಹಿಂಭಾಗ ಒಳಚರಂಡಿ ಮಾಡಿರುವುದರಿಂದ ಯಾವುದೇ ಮನೆಗೆ ನೀರು ಹೋಗದ ರೀತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಮೂರು ಬಾರಿ ಶಾಸಕರಾಗಲು ಅವಕಾಶವನ್ನು ಮಾಡಿಕೊಟ್ಟ ತಮ್ಮೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಅಶೋಕ್ ಪುರಂ ನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರಿನ ಕಲ್ಯಾಣ ಮಂಟಪ ನಿರ್ಮಾಣ, ನಮ್ಮ ಕ್ಲಿನಿಕ್ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಕೂಲಿ ಮಾಡಿ ಬದುಕುತ್ತಿರುವ ಬಡ ಕುಟುಂಬದವರಿಗೆ ಸೌಕರ್ಯವನ್ನು ಮಾಡಿದ್ದೇವೆ ಎಂದರು. ಕುಡಿಯುವ ನೀರಿನ ಘಟಕವನ್ನು ಅತಿ ಶೀಘ್ರದಲ್ಲೇ ಮಾಡಿಕೊಡುತ್ತೇನೆ. ಚುನಾವಣೆ ಮುಗಿದ ನಂತರ ಈ ಭಾಗಕ್ಕೆ ನೀರು ಕೊಡುವಂತಹ ಕೆಲಸವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.

About Author

Leave a Reply

Your email address will not be published. Required fields are marked *

You may have missed