ಬೆಳ್ಳಂಬೆಳಗ್ಗೆ ಕೈಗಾರಿಕಾ ಸಂಘದ ಅಧ್ಯಕ್ಷರ ಮನೆ ಮೇಲೆ IT ದಾಳಿ
ಆನೇಕಲ್: ಶನಿವಾರ ಬೆಳ್ಳಂಬೆಳಗ್ಗೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬೊಮ್ಮಸಂದ್ರ ಕೈಗಾರಿಕಾ ಸಂಘದ (Industrial Association) ಅಧ್ಯಕ್ಷರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ (IT Raid) ನಡೆದಿದೆ.
20ಕ್ಕೂ ಹೆಚ್ಚು ಅಧಿಕಾರಿಗಳು ಬೊಮ್ಮಸಂದ್ರ ಪುರಸಭಾ ಸದಸ್ಯರಾಗಿರುವ ಎ. ಪ್ರಸಾದ್ ಹಾಗೂ ಸಹೋದರ ಛಲಪ್ರಸಾದ್ ಅವಳಿ ಸಹೋದರರ ಮನೆ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಎ. ಪ್ರಸಾದ್ ಅವರ ಬೊಮ್ಮಸಂದ್ರ ನಿವಾಸ, ಸಹೋದರ ಛಲಪ್ರಸಾದ್ ಅವರ ಆರ್ಎಸ್ ಗಾರ್ಡೇನಿಯ ನಿವಾಸ, ಬೊಮ್ಮಸಂದ್ರ ಕೈಗಾರಿಕಾ ಸಂಘದ ಕಚೇರಿ ಹಾಗೂ ಕಂಪನಿ ಮೇಲೆ ದಾಳಿ ಮಾಡಿದ್ದಾರೆ.
ಬೊಮ್ಮಸಂದ್ರದಲ್ಲಿ ಪ್ರಭಾವಿ ನಾಯಕರಾಗಿರುವ ಎ.ಪ್ರಸಾದ್ ಹಾಗೂ ಛಲಪ್ರಸಾದ್ ಬಿಜೆಪಿಯಿಂದ (BJP) ಬೊಮ್ಮಸಂದ್ರ ಪುರಸಭೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ರು.