ವಿವಿಧ ಜಿಲ್ಲೆಗಳಲ್ಲಿ ಮನೆಗಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳರ ಬಂಧನ..!

0

ಬೆಂಗಳೂರು: ಬೆಂಗಳೂರು (Bnagalore) ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮನೆಗಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳರನ್ನು ಬೆಂಗಳೂರಿನ ತಲಘಟ್ಟಪುರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ತಲಘಟ್ಟಪುರ ನಿವಾಸಿ ರಘು ಅಲಿಯಾಸ್ ಪೆಪ್ಸಿ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ಇನ್ನೂ ಎಸ್ಕೇಪ್ ಆಗಿರುವ ಮೂವರು ಆರೋಪಿಗಳಾದ ಮಬಾರಕ್ ಅಲಿಯಾಸ್ ಬಾಬು, ನಾಗರಾಜ್, ಮುರುಗನ್ ಹುಡುಕಾಟದ ಶೋಧ ಕಾರ್ಯ ಮುಂದುವರಿದಿದೆ.

ಆರೋಪಿಗಳು, ಒಂಟಿ ಮನೆಗಳನ್ನೇ ಟಾರ್ಗೆಟ್ ಮಾಡಿ, ಚಿನ್ನಾಭರಣ, ಬೆಳ್ಳಿ ಜತೆಗೆ, ಬೈಕ್ ಗಳು, ಹಿತ್ತಾಳೆ ಸಾಮಾಗ್ರಿಗಳನ್ನು ಕದ್ದು ಎಸ್ಕೇಪ್ ಆಗುತ್ತಿದ್ದರು. ವಿವಿಧ ಠಾಣೆಗಳ ಬರೋಬ್ಬರಿ 25 ಕಳವು ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿರುವುದು ತಿಳಿದು ಬಂದಿದೆ. ತಲಘಟ್ಟಪುರ, ಹನುಮಂತನಗರ, ಸುಬ್ರಮಣ್ಯಪುರ, ಬಸವನಗುಡಿ, ಯಶವಂತಪುರ, ಚಾಮರಾಜಪೇಟೆ, ಬನಶಂಕರಿ, ಕುಮಾರಸ್ವಾಮಿ ಲೇಔಟ್, ಪುಟ್ಟೇನಹಳ್ಳಿ ಸೇರಿ ಹಲವೆಡೆ ಕೃತ್ಯ ಎಸಗಿರುವುದು ತಿಳಿದು ಬಂದಿದೆ. ಇನ್ನೂ ಬಂಧಿತ ಆರೋಪಿ ರಘು ಅಲಿಯಾಸ್ ಪೆಪ್ಸಿ ಯಿಂದ 10 ಲಕ್ಷ ಮೌಲ್ಯದ ಚಿನ್ನಾಭರಣ, ಎರಡು ಬೈಕ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

About Author

Leave a Reply

Your email address will not be published. Required fields are marked *

You may have missed