ಧಾರಾಕಾರ ಮಳೆಯಿಂದ ನಗರ ವ್ಯಾಪ್ತಿಯ ಕೆಳ ಸೇತುವೆಗಳು ಬಂದ್ : ತುಷಾರ್ ಗಿರಿನಾಥ್

0

ಬೆಂಗಳೂರು: ಭಾನುವಾರ ಸುರಿದ ಧಾರಾಕಾರ ಮಳೆ ಹಿನ್ನೆಲೆ ನಗರ ವ್ಯಾಪ್ತಿಯ ಕೆಳ ಸೇತುವೆಗಳು ಬಂದ್ ಮಾಡಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

ಈ ಸಂಬಂಧ ಬಿಬಿಎಂಪಿ ಕಚೇರಿಯಲ್ಲಿ ಮಾತನಾಡಿದ ಅವರು, ಕೆಆರ್ ಸರ್ಕಲ್‌ನ ಕೆಳ ಸೇತುವೆಯಲ್ಲಿ ಯುವತಿ ಸಾವಿನ ಪ್ರಕರಣ ಸಂಬಂಧ ಈಗಾಗಲೇ ನಗರದಲ್ಲಿರುವ ಎಲ್ಲ ಮಾದರಿಯ ಕೆಳಸೇತುವೆಗಳ ಮಾಹಿತಿ ಸಂಗ್ರಹಿಸಲಾಗಿದ್ದು, ಯಾವ ಕೆಳಸೇತುವೆಯಲ್ಲಿ ನೀರು ಸುಗಮವಾಗಿ ಹೋಗುವುದಿಲ್ಲವೂ, ಆ ಕೆಳಸೇತುವೆಗಳನ್ನು ತಾತ್ಕಲಿಕವಾಗಿ ಬಂದ್ ಮಾಡಲಾಗುವುದು ಎಂದರು.

ಇನ್ನೂ ಮೊನ್ನೆ 3.15 ರಿಂದ 4 ಗಂಟೆ ವೇಳೆಗೆ 50 ಮಿ. ಮೀಟರ್ ಮಳೆ ಸುರಿದಿದೆ.

45 ನಿಮಿಷದ ಅವಧಿಯಲ್ಲೇ ಭಾರಿ ಮಳೆ ಬಂದಿದ್ದರಿಂದ ಅವಾಂತರ ಆಗಿದೆ. ಕೆಲವು ಅಹಿತರ ಘಟನೆ ನಡೆದಿದೆ. ಈಗ ಕೆಳ ಸೇತುವೆಗಳ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಯಾವ ಯಾವ ಕೆಳ ಸೇತುವೆಗಳಲ್ಲಿ ಒಳಚರಂಡಿ ಇಲ್ಲವೂ ಅಥವಾ ನೀರು ಸುಗಮವಾಗಿ ಹರಿಯುವುದಿಲ್ಲವೋ ಅದನ್ನು ಬಂದ್ ಮಾಡುತ್ತೇವೆ. ಇಂದು ಸಂಜೆಯೊಳಗೆ ವರದಿ ಆಧರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ತುಷಾರ್ ಗಿರಿನಾಥ್ ಮಾಹಿತಿ ನೀಡಿದರು.

About Author

Leave a Reply

Your email address will not be published. Required fields are marked *

You may have missed