‘ನನ್ನಿಂದ ಮಧು ಬಂಗಾರಪ್ಪ ಗೆದ್ರು ಎಂದು ಯಾವಾಗಲೂ ಹೇಳಲ್ಲ’: ನಟ ಶಿವರಾಜ್ ಕುಮಾರ್

0

2024ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರ ನಟ ಶಿವರಾಜ್ ಕುಮಾರ್ ಪ್ರಚಾರ ಮಾಡಿದ್ದರು. ಶಿವಣ್ಣ ಪ್ರಚಾರ ಮಾಡಿದವರ ಪೈಕಿ ಬಾಮೈದ ಮಧು ಬಂಗಾರಪ್ಪಗೆ ಸಚಿವ ಸ್ಥಾನ ಸಿಕ್ಕಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಮಧು ಸಚಿವರಾಗಿ ಸೇವೆ ಸಲ್ಲಿಸಲಿದ್ದಾರೆ.

ಈ ಕುರಿತು ನಟ ಶಿವರಾಜ್​ಕುಮಾರ್​​ಗೆ ಖುಷಿ ಹಂಚಿಕೊಂಡಿದ್ದಾರೆ.

‘ಹಾರ್ಡ್​ ವರ್ಕ್​​ಗೆ ಪ್ರತಿಫಲ ಸಿಕ್ಕಿದೆ. ತುಂಬಾನೇ ಖುಷಿ ಆಗುತ್ತಿದೆ’ ಎಂದರು ಶಿವರಾಜ್​ಕುಮಾರ್. ಇದೇ ವೇಳೆ ಮಾತನಾಡಿದ ಗೀತಾ ಶಿರವಾಜ್​ಕುಮಾರ್ ಅವರು, ‘ತೋರಿಸಿಕೊಳ್ಳಲು ಆಗದೇ ಇರುವಷ್ಟು ಖುಷಿ ಆಗಿದೆ. ಮಧು ತುಂಬಾನೇ ಕಷ್ಟಪಟ್ಟಿದ್ದಾನೆ. ಹೇಳಿಕೊಳ್ಳೋಕೆ ಆಗಲ್ಲ’ ಎಂದಿದ್ದಾರೆ.

ಶಿವರಾಜ್ ಕುಮಾರ್ ಜೊತೆಗೆ ಮಧು ಬಂಗಾರಪ್ಪ ಕೂಡ ಖುಷಿ ಹಂಚಿಕೊಂಡಿದ್ದಾರೆ. ‘ಯಾವ ಸಚಿವ ಸ್ಥಾನ ಕೊಟ್ಟರೂ ಖುಷಿ ಇದೆ. ನನಗೆ ಅವಕಾಶ ನೀಡಿದ ಕರ್ನಾಟಕದ ಜನತೆಗೆ ಧನ್ಯವಾದ. ಅನೇಕರು ಗೆಲ್ಲೋಕೆ ಶಿವಣ್ಣ ಕಾರಣ. ಅವರಿಗೆ ತುಂಬು ಹೃದಯದ ಧನ್ಯವಾದ’ ಎಂದರು.

‘ಅವರವರ ಕೆಲಸವನ್ನು ಅವರು ಮಾಡಿದ್ದಾರೆ. ನನ್ನಿಂದ ಗೆದ್ದಿದ್ದಾರೆ ಅಂತಲ್ಲ. ನಾನು ಹೋಗಿ ಅಳಿಲು ಸೇವೆ ಮಾಡಿದ್ದೇನೆ ಅಷ್ಟೆ. ನನ್ನಿಂದಲೇ ಅವರು ಗೆದ್ದರು ಅನ್ನೋದು ಸರಿ ಅಲ್ಲ. ಮಧು ಬಂಗಾರಪ್ಪ ಅವರಿಗೆ ಅಧಿಕಾರ ಇಲ್ಲದೇ ಇರುವಾಗಲೇ ಕೆಲಸ ಮಾಡಿದ್ದರು. ಹೀಗಿರುವಾಗ ಅಧಿಕಾರ ಸಿಕ್ಕರೆ ಅವರು ಖಂಡಿತ ಕೆಲಸ ಮಾಡುತ್ತಾರೆ. ಅವರಿಗೆ ಸಹಾಯ ಮಾಡುವ ಮನೋಭಾವನೆ ಇದೆ. ಆ ಭಾವನೆ ಇದ್ರೆ ಮಾತ್ರ ಕೆಲಸ ಮಾಡೋಕೆ ಸಾಧ್ಯ ಎಂದು ಶಿವರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

About Author

Leave a Reply

Your email address will not be published. Required fields are marked *

You may have missed