ಸಂಸತ್ ಭವನ ಉದ್ಘಾಟನೆಗೆ ಭಾರೀ ವಿರೋಧ: ಪ್ರಜಾ ನ್ಯಾಯ ವೇದಿಕೆಯಿಂದ ಪ್ರತಿಭಟನೆ
ಬೆಂಗಳೂರು: ನೂತನ ಸಂಸತ್ ಭವನ ಉದ್ಘಾಟನೆಗೆ ಕರ್ನಾಟಕ ಸೇರಿ ದೇಶದಾದ್ಯಂತ ಭಾರೀ ವಿರೋಧ ವ್ಯಕ್ತವಾಗಿದೆ. ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿಯವರನ್ನು ಆಹ್ವಾನಿಸದ ಹಿನ್ನಲೆ ಪ್ರಜಾ ನ್ಯಾಯ ವೇದಿಕೆಯಿಂದ ಇಂದು ಬೆಂಗಳೂರಿನಲ್ಲಿ ಪ್ರತಿಭಟನೆ ಜರುಗಿದೆ.
ವಿಧಾನಸೌಧ ಮುಂಭಾಗ ಪ್ರಜಾ ನ್ಯಾಯ ವೇದಿಕೆಯಿಂದ ಮಾಜಿ ಸಚಿವೆ ಬಿ ಟಿ ಲಲಿತಾ ನಾಯಕ್ ನೇತೃತ್ವದಲ್ಲಿ ಬಾಯಿಗೆ ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆಯಲ್ಲಿ ಹೆ.ಎಂ ವೆಂಕಟೇಶ್, ನ್ಯಾಯವಾದಿ ನರಸಿಂಹ ಮೂರ್ತಿ ಹಾಗೂ ಹಲವು ಪ್ರಗತಿಪರ ಚಿಂತಕರು ಭಾಗಿಯಾಗಿದ್ದಾರೆ. ಇನ್ನೂ ಪ್ರಧಾನಿ ನರೇಂದ್ರ ಮೋದಿ ಅವರು ಒತ್ತಾಸೆಯಂತೆ ನಿರ್ಮಾಣ ಮಾಡಿರುವ ನೂತನ ಸಂಸತ್ ಭವನ ಉದ್ಘಾಟನೆ ಆಗಿದೆ. ಆದರೆ ಉದ್ಘಾಟನಾ ಸಮಾರಂಭಕ್ಕೆ ವಿರೋಧ ಪಕ್ಷಗಳು ಬಹಿಷ್ಕಾರ ಹಾಕಿತ್ತು.