6 ವರ್ಷದ ಮಗುವಿನಿಂದ 5 ವರ್ಷದ ಬಳಿಕ ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಶಾಮ್ಲಿ: 2018ರಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ವರ್ಷದ ಮಗುವಿನ ಸಾಕ್ಷಿ ಆಧರಿಸಿ ಕೋರ್ಟ್ ಆರೋಪಿಗಳಿಗೆ ಶಿಕ್ಷೆ ನೀಡಿದೆ. ಗಂಡನನ್ನು ಕೊಲೆ ಮಾಡಿದ ಮಹಿಳೆ ಹಾಗೂ ಆಕೆಯ ಗೆಳೆಯನಿಗೆ ಕೋರ್ಟ್ಜೀವಾವಧಿ ಶಿಕ್ಷೆ ವಿಧಿಸಿದೆ.
37 ವರ್ಷದ ರಾಜೇಶ್ ದೇವಿ ಹಾಗೂ ಆಕೆಯ ಗೆಳೆಯ 39 ವರ್ಷದ ಪ್ರದೀಪ್ ಕುಮಾರ್ ಶಿಕ್ಷೆಗೆ ಒಳಗಾದವರು. ಆರು ವರ್ಷದ ಮಗು ಕಾರ್ತಿಕೇಯ ಸಿಂಗ್ ಸಾಕ್ಷಿ ಹೇಳಿದ ಹಿನ್ನೆಲೆಯಲ್ಲಿ ಈ ಶಿಕ್ಷೆಯಾಗಿದೆ.
2018ರ ಜೂನ್ 12 ರಂದು ನಡೆದ ಕೊಲೆ ಪ್ರಕರಣ (Murder case) ಇದಾಗಿದೆ. ತನ್ನ ಹಾಗೂ ತನ್ನ ಗೆಳೆಯನ ಅಕ್ರಮ ಸಂಬಂಧವನ್ನು ವಿರೋಧಿಸಿದ ಗಂಡನನ್ನು ಮಹಿಳೆ ತನ್ನ ಗೆಳೆಯನೊಂದಿಗೆ ಸೇರಿ ಕತ್ತು ಹಿಸುಕಿ ಕೊಲೆ ಮಾಡಿದ್ದಳು. ನಂತರ ಮನೆಯ ಬಾಗಿಲಿಗೆ ಪತಿಯ ಶವವನ್ನು ನೇಣು ಹಾಕಿ ಆತ್ಮಹತ್ಯೆ ಎಂದು ಬಿಂಬಿಸಿದ್ದರು. 35 ವರ್ಷದ ಧರ್ಮವೀರ್ ಸಿಂಗ್ ಕೊಲೆಯಾದ ವ್ಯಕ್ತಿ.
ಪ್ರಸ್ತತು 11 ವರ್ಷದವನಾಗಿರುವ ಆರನೇ ತರಗತಿಯಲ್ಲಿ ಓದುತ್ತಿರುವ ಮಗು ಈ ಎಲ್ಲಾ ಘಟನೆಯನ್ನು ಕಣ್ಣಾರೆ ನೋಡಿತ್ತು. ಅಲ್ಲದೇ ತನ್ನ ಅಜ್ಜನ ಬಳಿ ಘಟನೆಯನ್ನು ವಿವರಿಸಿತ್ತು. ನಂತರ ಪೊಲೀಸರು ಹಾಗೂ ಕೋರ್ಟ್ನಲ್ಲೂ ಸಾಕ್ಷ್ಯ ಹೇಳಿತ್ತು. ಈ ಮಗು ಪ್ರಸ್ತುತ ಭಾಗ್ಪತ್ ಜಿಲ್ಲೆಯ ಖೆಕ್ರಾ ಗ್ರಾಮದಲ್ಲಿರುವ ತನ್ನ ತಂದೆಯ ಕಡೆಯ ಸಂಬಂಧಿಯೊಬ್ಬರ ಮನೆಯಲ್ಲಿ ವಾಸ ಮಾಡುತ್ತಾ ಶಾಲೆಗೆ ಹೋಗುತ್ತಿದ್ದು, ಆರನೇ ತರಗತಿಯಲ್ಲಿ ಓದುತ್ತಿದೆ.
ತೀರ್ಪಿನ ಬಳಿಕ ಮಗು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನನ್ನನ್ನು ತುಂಬಾ ಪ್ರೀತಿಸುವ ಅಪ್ಪನನ್ನು ಕೊಂದ ದಿನವೇ ನನ್ನ ಪಾಲಿಗೆ ನನ್ನ ತಾಯಿ ಸತ್ತು ಹೋದಳು. ನಾನು ದೊಡ್ಡವನಾದ ಬಳಿಕ ಪೊಲೀಸ್ ಅಧಿಕಾರಿ ಆಗಬೇಕೆಂದು ಬಯಸಿದ್ದು, ಇಂತಹ ಪ್ರಕರಣಗಳಿಗೆ ನ್ಯಾಯ ಒದಗಿಸಬೇಕೆಂದಿದ್ದೇನೆ ಎಂದು ಹೇಳಿದರು.