ರಾಹುಲ್ ಗಾಂಧಿ ಮುಸ್ಲಿಮರ ಜೀವನ ಮತ್ತು ಧರ್ಮದ ಅಭದ್ರತೆ ಬಗ್ಗೆ ಹೇಳಿರುವುಗು ಕಹಿ ಸತ್ಯ: ಮಾಯಾವತಿ

0

ಖನೌ: ದೇಶದಲ್ಲಿ ದಲಿತರು ಮತ್ತು ಮುಸ್ಲಿಮರ ‘ದಯನೀಯ ಸ್ಥಿತಿ’ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಇತ್ತೀಚೆಗೆ ನೀಡಿರುವ ಹೇಳಿಕೆ ‘ಕಹಿ ಸತ್ಯ’ ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ (Mayawati) ಹೇಳಿದ್ದಾರೆ.

ಹಿಂದಿಯಲ್ಲಿ ಸರಣಿ ಟ್ವೀಟ್‌ ಮಾಡಿದ ಮಾಯಾವತಿ ಕಾಂಗ್ರೆಸ್ (Congress) ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಯುಎಸ್ ಪ್ರವಾಸದ ಸಮಯದಲ್ಲಿ ಕೋಟ್ಯಂತರ ದಲಿತರು ಮತ್ತು ಮುಸ್ಲಿಮರ ಶೋಚನೀಯ ಸ್ಥಿತಿ ಮತ್ತು ಮತ್ತು ಭಾರತದಲ್ಲಿ ಅವರ ಜೀವನ ಮತ್ತು ಧರ್ಮದ ಅಭದ್ರತೆ ಬಗ್ಗೆ ಹೇಳಿರುವುಗು ಕಹಿ ಸತ್ಯವಾಗಿದೆ,

ಇದಕ್ಕೆ ಕೇಂದ್ರದ ಕಾಂಗ್ರೆಸ್, ಬಿಜೆಪಿ ಮತ್ತು ಇತರ ಪಕ್ಷಗಳ ಸರ್ಕಾರಗಳು ಸಂಪೂರ್ಣ ಹೊಣೆಗಾರರಾಗಿದ್ದಾರೆ. ಯುಪಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಸರ್ಕಾರ ಏನೇ ಇರಲಿ, ಬಹುಸಂಖ್ಯಾತ ವರ್ಗದವರಿಂದ ಬಡವರು ಮತ್ತು ವಂಚಿತರು (ಸಮಾಜದ ವಿಭಾಗಗಳು) ಅನ್ಯಾಯ, ದೌರ್ಜನ್ಯಗಳು ಮತ್ತು ಶೋಷಣೆ ಸಾಮಾನ್ಯ ಸಂಗತಿಯಾಗಿದೆ. ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ ಸರ್ಕಾರವು ಕಾನೂನಿನ ಆಳ್ವಿಕೆಯನ್ನು ಸ್ಥಾಪಿಸಿತು ಮತ್ತು ಎಲ್ಲರಿಗೂ ನ್ಯಾಯವನ್ನು ಒದಗಿಸಿತು ಎಂದು ಅವರು ಹೇಳಿದ್ದಾರೆ.

About Author

Leave a Reply

Your email address will not be published. Required fields are marked *

You may have missed