ಜಯಲಲಿತಾಗೆ ಸೇರಿದ 11,344 ಸೀರೆ, 91 ಕೈಗಡಿಯಾರ, 750 ಅಲಂಕೃತ ಚಪ್ಪಲಿಗಳು ಮಾಯ..!

0

ಚೆನ್ನೈತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರಿಗೆ ಸೇರಿದ ಚಿನ್ನ, ವಜ್ರ, ಬೆಳ್ಳಿ ಬೆಲೆಬಾಳುವ ವಸ್ತುಗಳನ್ನು ಬೆಂಗಳೂರು ವಿಶೇಷ ನ್ಯಾಯಾಲಯಕ್ಕೆ ಒಪ್ಪಿಸುವಂತೆ ಪ್ರಕರಣದ ಮೂಲ ಅರ್ಜಿದಾರರು ತಮಿಳುನಾಡು ವಿಚಕ್ಷಣಾ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದಾರೆ.

ಜಯಲಲಿತಾ ಅವರಿಂದ ವಶಪಡಿಸಿಕೊಂಡಿದ್ದ ಅಮೂಲ್ಯ ವಸ್ತುಗಳ ಹರಾಜಿಗೆ ಸಂಬಂಧಿಸಿದಂತೆ ಬೆಂಗಳೂರಿನ ವಿಶೇಷ ನ್ಯಾಯಾಲಯ ತೀರ್ಪು ಕಾಯ್ದಿರಿಸಿರುವ ನಡುವೆಯೇ ಅವರು ಈ ಪತ್ರ ಬರೆದಿದ್ದಾರೆ.

1996 ಡಿಸಂಬರ್‌ನಲ್ಲಿ ಭ್ರಷ್ಟಾಚಾರ ನಿಗ್ರಹ ದಳವು ಚೆನ್ನೈನಲ್ಲಿರುವ ಜಯಲಲಿತಾ ಅವರ ಪೋಯಸ್ ಗಾರ್ಡನ್ ನಿವಾಸದಲ್ಲಿ 28 ವಿವಿಧ ಬಗೆಯ ವಸ್ತುಗಳನ್ನು ವಶಕ್ಕೆ ಪಡೆದಿತ್ತು. ಚಿನ್ನ, ಬೆಳ್ಳಿ, ವಜ್ರ, ಹವಳ, ಎಮರಾಲ್ಡ್, ಮುತ್ತು, ಬೆಲೆಬಾಳುವ ಹರಳುಗಳು ಸೇರಿದಂತೆ ಇನ್ನಿತರ ಬೆಲೆಬಾಳುವ ವಸ್ತುಗಳು ಇದರಲ್ಲಿ ಸೇರಿತ್ತು. ಜಯಲಲಿತಾ ಪ್ರಕರಣವನ್ನು ಸುಪ್ರೀಂಕೋರ್ಟ್, ಕರ್ನಾಟಕಕ್ಕೆ ವಹಿಸಿದ ನಂತರ, ಈ ಎಲ್ಲಾ ಬೆಲೆಬಾಳುವ ವಸ್ತುಗಳನ್ನು ಬೆಂಗಳೂರು ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು.

ಉಳಿದಿರುವ 28 ಬಗೆಯ ವಸ್ತುಗಳನ್ನು ಇನ್ನೂ ಬೆಂಗಳೂರು ನ್ಯಾಯಾಲಯಕ್ಕೆ ಒಪ್ಪಿಸಿಲ್ಲ. ಅದರಲ್ಲಿ 11344 ಸೀರೆಗಳು, ಚಿನ್ನದ ಪೆನ್, ಚಿನ್ನದ ಸೊಂಟದಪಟ್ಟಿ, 91 ಕೈಗಡಿಯಾರ, ಒಂದು ಚಿನ್ನದ ವಾಚ್, 700 ಕೆಜಿ ಬೆಳ್ಳಿ, 298 ಫರ್ನೀಚರ್ಸ್, 750 ಚಪ್ಪಲಿಗಳು, 44 ಏರ್ ಕಂಡಿಶನರ್‌ಗಳು, 1.6 ಲಕ್ಷ ರೂ ಮೌಲ್ಯದ ನಗದು, 400 ಗೃಹಪಯೋಗಿ ವಸ್ತುಗಳು ಸೇರಿದೆ.

ವಶಪಡಿಸಿಕೊಂಡ ಎಲ್ಲಾ ವಸ್ತುಗಳ ಹರಾಜಿಗೆ ಸಂಬಂಧಿಸಿದಂತೆ ಬೆಂಗಳೂರು ನ್ಯಾಯಾಲಯದ ಮೆಟ್ಟಿಲೇರಿರುವ ಟಿ ನರಸಿಂಹ ಮೂರ್ತಿ ಅವರು ಜುಲೈ 3 ರಂದು ತಮಿಳುನಾಡು ವಿಚಕ್ಷಣಾ ನಿರ್ದೇಶನಾಲಯ ಹಾಗೂ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಪತ್ರ ಬರೆದಿದ್ದಾರೆ. ಅಕ್ರಮ ಆಸ್ತಿ ಪ್ರಕರಣದಲ್ಲಿನ ಎಲ್ಲಾ ವಶಪಡಿಸಿಕೊಂಡ ವಸ್ತುಗಳನ್ನು ವಿಚಾರಣೆ ಪ್ರಾರಂಭವಾಗುವ ಮೊದಲು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಆರೋಪಿಗಳು ಆ ವಸ್ತುಗಳು ತಮಗೆ ಸೇರಿದ್ದು ಎಂದು ದೃಢೀಕರಿಸಬಹುದು. ಈ ಪ್ರಕರಣದ ತನಿಖೆ ಶುರುವಾಗಿ 27 ವರ್ಷಗಳಾಗಿವೆ. ಆದರೂ ಕೆಲವೂ ವಸ್ತುಗಳು ಇನ್ನೂ ಭ್ರಷ್ಟಾಚಾರ ನಿಗ್ರಹ ದಳದವರ ವಶದಲ್ಲಿಯೇ ಇದೆ ಎಂದು ಉಲ್ಲೇಖಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed