ಕ್ಯಾಂಟರ್ ವಿಷಯಕ್ಕೆ ರಸ್ತೆ ಮಧ್ಯೆ ಹರಿದ ನೆತ್ತರು: ಸಹೋದರಿಗೆ ಫೋನ್ ಮಾಡಿದ್ದ ದುಷ್ಕರ್ಮಿಗಳು!

0

ಬೆಂಗಳೂರು: ಮೇ 13ರಂದು ಒಂದು ಕಡೆ ಚುನಾವಣಾ ಫಲಿತಾಂಶ(Karnataka Assembly Elections 2023 Result) ಹೊರಬಿದ್ರೆ ಮತ್ತೊಂದು ಕಡೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೆತ್ತರು ಹರಿದಿದೆ(Murder). ಮೇ 13ರ ಬೆಳಗಿನ ಜಾವ ಇಡೀ ರಾಜ್ಯ ಚುನಾವಣೆ ಫಲಿತಾಂಶಕ್ಕಾಗಿ ಟಿವಿ ಮುಂದೆ ಕೂತಿತ್ತು.

ಆದ್ರೆ ಪೈಪ್ ಲೇನ್ ರಸ್ತೆಯ ರೈಲ್ವೆ ಟ್ರ್ಯಾಕ್ ಪಕ್ಕದ ರಸ್ತೆಯಲ್ಲಿ ಹೆಣ ಬಿದಿದೆ. ಜಬೀ ಉಲ್ಲಾ (24) ಕೊಲೆಯಾದ ವ್ಯಕ್ತಿ. ಕೆಲ ಹಂತಕರು ಜಬೀ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.

ಹಲ್ಲೆ ಮಾಡಿ ಸಹೋದರಿಗೆ ಕಾಲ್ ಮಾಡಿದ ಹಂತಕರು

ಪೈಪ್ ಲೇನ್ ರಸ್ತೆಯ ರೈಲ್ವೆ ಟ್ರ್ಯಾಕ್ ಪಕ್ಕದ ರಸ್ತೆಯಲ್ಲಿ ಜಬೀಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದ ಹಂತಕರು ಬಳಿಕ ಕೊಲೆಯಾದವನ ಸಹೋದರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಹಲ್ಲೆ ಮಾಡಿದ್ದೇವೆ ಆಸ್ಪತ್ರೆಗೆ ಸೇರಿಸಿ ಎಂದಿದ್ದಾರೆ. ಇದರಿಂದ ಶಾಕ್ ಆದ ಜಬೀ ಸಹೋದರಿ ತಕ್ಷಣವೇ ಕೊಲೆಯಾದ ಸ್ಥಳಕ್ಕೆ ಧಾವಿಸಿದ್ದಾರೆ. ಸ್ಥಳಕ್ಕೆ ಬರುವಷ್ಟರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಜಬೀ ಪ್ರಾಣಪಕ್ಷಿ ಹಾರಿ ಹೋಗಿದೆ. ಇನ್ನು ಕೊಲೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಜೆಜೆನಗರ ಪೊಲೀಸರು ಸದ್ಯ ಕೊಲೆ ಸಂಬಂಧ ನಾಲ್ಕಕ್ಕೂ ಅಧಿಕ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳು ಜಬೀಗೆ ಕ್ಯಾಂಟರ್ ಕೊಡಿಸಿದ್ದರು. ಬಳಿಕ ತಿಂಗಳಿಗೆ ಇಷ್ಟು ಹಣ ಕೊಡುವಂತೆ ಹೇಳಿದ್ದರು. ಆರಂಭದಲ್ಲಿ ಹಣ ಕೊಟ್ಟು ಬಳಿಕ ಕೊಡದೇ ಜಬೀ ಸುಮ್ಮನಾಗಿದ್ದ. ಇದೇ ವಿಚಾರವಾಗಿ ಜಗಳ ನಡೆದು ಆರೋಪಿಗಳು ಜಬೀಯನ್ನು ಕೊಲೆ ಮಾಡಿದ್ದಾರೆ. ಜೆಜೆ ನಗರ ಪೊಲೀಸರಿಂದ ತನಿಖೆ ಮುಂದುವರೆದಿದೆ.

About Author

Leave a Reply

Your email address will not be published. Required fields are marked *

You may have missed