ಬೆಂಗಳೂರಲ್ಲಿ ಇಂದಿರಾ ಕ್ಯಾಂಟೀನ್ ಸರಿಪಡಿಸಲು ಮುಂದಾದ ಬಿಬಿಎಂಪಿ

0

ಬೆಂಗಳೂರು: ಇಂದಿರಾ ಕ್ಯಾಂಟಿನ್​ನ ಅಭಿವೃದ್ಧಿಗಾಗಿ ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ 100 ಕೋಟಿ ಬಿಡುಗಡೆ ಮಾಡಿದ್ದಾರೆ. ಆದ್ರೆ ಇಲ್ಲಿ ಊಟ, ತಿಂಡಿಗೆ ಹೆಚ್ಚಿನ ಹಣ ಪಡೆಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ ಸರಿಪಡಿಸಲು ಬಿಬಿಎಂಪಿ ಮುಂದಾಗಿದೆ.

ಡಿಸಿಎಂ ಡಿಕೆ ಶಿವಕುಮಾರ್​ ಅವರ ಭೇಟಿ ವೇಳೆ ಇಂದಿರಾ ಕ್ಯಾಂಟೀನ್​ನಲ್ಲಿ ಹಚ್ಚಿನ ಹಣ ಪಡೆಯುತ್ತಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಈ ಹಿನ್ನಲೆ ಈಗ ಪ್ರತಿ ಇಂದಿರಾ ಕ್ಯಾಂಟೀನ್​ಗೆ ಪಾಲಿಕೆ ಅಧಿಕಾರಿ ನೇಮಕ ಮಾಡಲು ಬಿಬಿಎಂಪಿ ತೀರ್ಮಾನಿಸಿದೆ.ಹಾಗೆ ಇಂದಿರಾ ಕ್ಯಾಂಟೀನ್ ಸಿಗಲಿದೆ ಹೈಟೆಕ್ ಸ್ಪರ್ಶ ಏನಂತೀರಾ ಇಲ್ಲಿದೆ ನೋಡಿ.

ಆಗಸ್ಟ್​ 1ರಿಂದ ಬದಲಾದ ರೂಪದಲ್ಲಿ ಇಂದಿರಾ ಕ್ಯಾಂಟೀನ್​ಗಳು..!

– ಹೊಸ ಟೆಂಡರ್, ಹೊಸ ಮೆನುವಿನೊಂದಿಗೆ ಕಾರ್ಯನಿರ್ವಹಿಸಲಿವೆ ಇಂದಿರಾ ಕ್ಯಾಂಟೀನ್​ಗಳು

– ಇಂದಿರಾ ಕ್ಯಾಂಟೀನ್​ ಟೆಂಡರ್​ಗೆ ಸರ್ಕಾರದಿಂದ ನಡಾವಳಿ ಸಿದ್ದ

– ನಡಾವಳಿ ಸಿದ್ಧಪಡಿಸಿ ಬಿಬಿಎಂಪಿಗೆ ರವಾನೆ ​ಮಾಡಿರುವ ನಗರಾಭಿವೃದ್ಧಿ ಇಲಾಖೆ

– ಸರ್ಕಾರದ ನಡಾವಳಿಯಂತೆ ಟೆಂಡರ್​ ಡಾಕ್ಯುಮೆಂಟ್ಸ್​​ ತಯಾರಿಸ್ತಿರುವ ಬಿಬಿಎಂಪಿ

– ವಲಯವಾರು ಟೆಂಡರ್​ ಕರೆಯಲು ಡಾಕ್ಯುಮೆಂಟ್ಸ್​ ಸಿದ್ಧಪಡಿಸ್ತಿರುವ ಅಧಿಕಾರಿಗಳು

ಮುಂದಿನ 3 ದಿನಗಳಲ್ಲಿ ಇಂದಿರಾ ಕ್ಯಾಂಟೀನ್​ಗೆ ಟೆಂಡರ್

– 15 ರಿಂದ 20 ದಿನಗಳ ಒಳಗೆ ಟೆಂಡರ್​ ಫೈನಲ್​

– ಕಳೆದ ಬಾರಿಯ ಟೆಂಡರ್​​ ಮೊತ್ತಕ್ಕೂ ಹೊಸ ಟೆಂಡರ್​ ಮೊತ್ತಕ್ಕೂ ವ್ಯತ್ಯಾಸ

ಹೊಸ ಮೆನುವಿನೊಂದಿಗೆ ಮುಂದಿನ ತಿಂಗಳಿನಿಂದ ಕಾರ್ಯ ನಿರ್ವಹಿಸಲಿವೆ ಇಂದಿರಾ ಕ್ಯಾಂಟೀನ್​ಗಳು

About Author

Leave a Reply

Your email address will not be published. Required fields are marked *

You may have missed