ಅನ್ನಭಾಗ್ಯ ಯೋಜನೆ: 7.5 ಲಕ್ಷ ಜನರ ಖಾತೆಗೆ ಹಣ ಜಮೆ

0

ಬೆಂಗಳೂರು : ರಾಜ್ಯ ಸರ್ಕಾರದ ದೊಡ್ಡ ಕನಸಾದ ಅನ್ನಭಾಗ್ಯ ಯೋಜನೆಗೆ ಅಧೀಕೃತವಾಗಿ ಜಾರಿಯಾಗಿದ್ದು ಅಕ್ಕಿ ಬದಲು ಹಣ ನೀಡುವ ರಾಜ್ಯ ಸರ್ಕಾರದ ನಿರ್ಧಾರದಂತೆ 1ಕೆಜಿ ಅಕ್ಕಿಗೆ 34 ರೂಪಾಯಿಯಂತೆ 170 ರೂಪಾಯಿ ಹಣ ಅರ್ಹ ಫಲಾನುಭವಿಗಳ ಖಾತೆಗೆ ನೇರ ಹಣ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿದೆ.

ಯೋಜನೆಯಡಿ 5 ಕೆಜಿ ಅಕ್ಕಿ ಜೊತೆಗೆ ಉಳಿದ 5 ಕೆಜಿ ಅಕ್ಕಿ ಬದಲಿಗೆ ಹಣವನ್ನು ಅರ್ಹ ಫಲಾನುಭವಿಗಳ ಖಾತೆಗೆ ನೇರ ವರ್ಗಾವಣೆ ಮೂಲಕ ಚಾಲನೆ ದೊರೆದಿದೆ. ಈ ಯೋಜನೆಯನ್ನು ಆರಂಭಿಕವಾಗಿ ಕೋಲಾರ ಮತ್ತು ಮೈಸೂರು ಜಿಲ್ಲೆಗಳ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿದೆ.

ಈಗಾಗಲೇ 7 ಲಕ್ಷ 55 ಸಾವಿರ ಕ್ಕೂ ಹೆಚ್ಚು ಜನರ ಖಾತೆಗೆ ಹಣ ಜಮೆಯಾಗಿದ್ದು ಉಳಿ ಫಲಾನುಭವಿಗಳ ಖಾತೆಗೆ ಹತ್ತು ದಿನದ ಒಳಗಾಗಿ ಹಾಕಲಾಗುತ್ತೆ ಯಾರ ಖಾತೆಗೆ ಹಣ ಜಮೆಯಾಗಿದೆಯೋ ಅಂಥವರ ಮೊಬೈಲ್​ ನಂಬರ್​ಗೆ ಹಣ ಜಮೆಯಾಗಿರುವ ಸಂದೇಶ ಬರಲಿದೆ.

About Author

Leave a Reply

Your email address will not be published. Required fields are marked *

You may have missed