ನನ್ನ ವಿರುದ್ಧ ಯಾರೂ ಸ್ಪರ್ಧೆ ಮಾಡ್ತಾರೋ ಅದೂ ಗೊತ್ತಿಲ್ಲ: ಸಂಸದ ಪ್ರತಾಪ್ ಸಿಂಹ

0

ಮೈಸೂರು : ನನ್ನದು ಅಭಿವೃದ್ಧಿ ರಾಜಕಾರಣ. ನಾನು ಅಭಿವೃದ್ಧಿ ಬಗ್ಗೆಯಷ್ಟೇ ತಲೆಕೆಡಿಸಿಕೊಂಡಿದ್ದೇನೆ. ನನ್ನನ್ನು ಏನು ಕೇಳಬೇಡಿ, ನನಗೆ ಏನು ಗೊತ್ತಿಲ್ಲ ಅಂತ ಸಂಸದ ಪ್ರತಾಪ್ ಸಿಂಹ ಅವರು ಹೇಳಿದ್ದಾರೆ. ಈ ಮೂಲಕ ಮಹಾಘಟಬಂಧನ್ ಮತ್ತು ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ವಿಚಾರದ ಬಗ್ಗೆ ಪ್ರತಿಕ್ರಿಯಿಸದೇ ಮೌನಕ್ಕೆ ಜಾರಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, ನನ್ನನ್ನು ಏನೂ ಕೇಳ್ಬೇಡಿ, ನನ್ನ ವಿರುದ್ಧ ಯಾರೂ ಸ್ಪರ್ಧೆ ಮಾಡ್ತಾರೋ ಅದೂ ಗೊತ್ತಿಲ್ಲ. ರಾಜಕೀಯ ವಿಚಾರವಾಗಿ ನಾನು ಮಾತನಾಡಲ್ಲ. ಮಾಧ್ಯ,ಮಗಳ ಜೊತೆ ಮಾತನಾಡಬೇಡಿ ಎಂದು ಯಾರೂ ನನಗೆ ಸೂಚನೆ ನೀಡಿಲ್ಲ. ನಾನು ಕೆಲಸ ಮಾಡಿದ್ದೇನೆ, ಏನು ಕೆಲಸ ಮಾಡಿದ್ದೇನೆ ಎಂದು ನೋಡಿಕೊಳ್ಳಲು ಮೇಲೆ ಚಾಮುಂಡಿ ತಾಯಿ ಇದ್ದಾಳೆ ಎಂದು ಹೇಳಿದರು.

About Author

Leave a Reply

Your email address will not be published. Required fields are marked *

You may have missed