ರಾಜಧಾನಿ ಬೆಂಗಳೂರಿನಲ್ಲಿ ನಿವೃತ್ತ ಐಟಿ ಉದ್ಯೋಗಿ ಹತ್ಯೆ
ಬೆಂಗಳೂರು ;- ಜೆಪಿನಗರ 28ನೇ ಕ್ರಾಸ್ ಮನೆಯಲ್ಲಿ ನಿವೃತ್ತ ಐಟಿ ಉದ್ಯೋಗಿ ವೆಂಕಟೇಶ್ ನನ್ನು ರಾಜಧಾನಿ ಬೆಂಗಳೂರಿನಲ್ಲಿ ಹತ್ಯೆ ಮಾಡಲಾಗಿದೆ. ದಂಪತಿ ಮನೆಯಲ್ಲಿದ್ದ ವೇಳೆ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಪರಿಚಯಸ್ಥರೇ ವೆಂಕಟೇಶ್ ಅವರನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಜೆಪಿ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನೂ ಕೋಳಿ ಅಂಗಡಿ ವಿಚಾರಕ್ಕೆ ಸಂಬಂಧಿಸಿದಂತೆ ನಾಗರಾಜು ಹಾಗೂ ಅಭಿಷೇಕ್ ಎಂಬುವರಿಂದ ಕೊಲೆ ಮಾಡಲಾಗಿದೆ. ನಾಗರಾಜು ಹಾಗೂ ಅಭಿಷೇಕ್ ಇಬ್ಬರು ತಂದೆ – ಮಗ. ಬಸವೇಶ್ವರನಗರದಲ್ಲಿ ವೆಂಕಟೇಶ್ ಮನೆ ಇತ್ತು. ಆ ಮನೆಯನ್ನು ವೆಂಕಟೇಶ್ ಬಾಡಿಗೆ ಬಿಟ್ಟಿದ್ದ. ವೆಂಕಟೇಶ್ ಮನೆ ಮುಂದೆ ನಾಗರಾಜು ಕೋಳಿ ಅಂಗಡಿ ತೆರದಿದ್ದ. ಕೋಳಿ ಅಂಗಡಿ ತೆರವು ಮಾಡುವಂತೆ ವೆಂಕಟೇಶ್ ಜಗಳ ಮಾಡಿದ್ದ. ಇದೇ ವಿಚಾರದಲ್ಲಿ ವೆಂಕಟೇಶ್ ನನ್ನು ಅಪ್ಪ ಮಗ ಕೊಲೆ ಮಾಡಿದ್ದಾರೆ. ಈ ಸಂಬಂಧ ಜೆಪಿನಗರ ಪೊಲೀಸರಿಂದ ತನಿಖೆ ಮುಂದುವರಿದಿದೆ.