ಆಂಬರ್ ಗ್ರೀಸ್ ಮಾರಾಟ ಮಾಡುತಿದ್ದ ಗ್ಯಾಂಗ್ ಅರೆಸ್ಟ್..!
ಬೆಂಗಳೂರು: 15 ಕೋಟಿ ರೂ. ಮೌಲ್ಯದ ಅಂಬರ್ಗ್ರೀಸ್(ತಿಮಿಂಗಿಲದ ವಾಂತಿ)ನ್ನ ಮಾರಾಟ ಮಾಡಲು ಯತ್ನಿಸಿದ ಆರೋಪಿಗಳನ್ನ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ಸಾಜೀರ್, ಸಲೀಂ, ಚಾಲ್ಸ್, ವಿಜು, ನೌಶಾದ್ ಬಂಧನಕ್ಕೊಳಗಾದ ಆರೋಪಿಗಳು.
ಇವರು ಕೇರಳದಿಂದ ಬಂದು ಬೆಂಗಳೂರಿನಲ್ಲಿ ಗ್ರಾಹಕರಿಗೆ ಮಾರಾಟ ಮಾಡಲು ಯತ್ನಿಸಿದ್ದಾಗ,
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ 15 ಕೋಟಿ ರೂ ಬೆಲೆಬಾಳುವ 49 ಕೆಜಿ ಅಂಬರ್ಗ್ರೀಸ್(ತಿಮಿಂಗಿಲದ ವಾಂತಿ)ನ್ನ ಜಪ್ತಿ ಮಾಡಿದ್ದಾರೆ. ಇನ್ನು ಈ ಗ್ಯಾಂಗ್ ಅಂಬರ್ಗ್ರೀಸ್ನ್ನ ತ್ರಿಶ್ಶೂರ್ನ ಮೀನುಗಾರರ ಬಳಿ ಖರೀದಿಸಿದ್ದರಂತೆ. ಈ ಕುರಿತು ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.