ತಂದೆಯನ್ನೇ ಕೊಲೆ ಮಾಡಿದ ಮಗ….!

0

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕೌಟಿಂಬಿಕ ಕಲಹದ ಹಿನ್ನಲೆ ನಡೆಯೋ ಕೊಲೆಗಳ ಸಂಖ್ಯೆ ಹೆಚ್ಚಾಗ್ತಿದೆ.. ಕೆಲ ದಿನಗಳ ಹಿಂದಷ್ಟೇ ತಾಯಿಯನ್ನೇ ಕೊಲೆ ಮಾಡಿದ ಮಗಳು ಮೃತದೇಹವನ್ನ ಪೊಲೀಸ್ ಠಾಣೆಗೆ ತಂದಿದ್ಲು.. ಆದ್ರೀಗ ಆ ಘಟನೆ ಮಾಸೊ ಮುನ್ನವೇ ಮತ್ತೊಂದು ಕೊಲೆ ನಡೆದಿದ್ದು, ತಂದೆಯನ್ನೇ ಹತ್ಯೆ ಮಾಡಿದ ಮಗ ಪೊಲೀಸರ ಮುಂದೆ ಹೈಡ್ರಾಮಾ ಮಾಡಿ ಕೊನೆಗೂ ಲಾಕ್ ಆಗಿದ್ದಾನೆ.

ಬೆಂಗಳೂರಿನಲ್ಲಿ ಇತ್ತಿಚಿಗೆ ಸಂಬಂಧಗಳಿಗೆ ಬೆಲೆಯೇ ಇಲ್ಲವೇನೋ ಅನ್ನೊ ಮಟ್ಟಿಗೆ ವಾತಾವರಣ ಸೃಷ್ಟಿಯಾಗಿದೆ.. ಒಂದಲ್ಲ ಒಂದು ರೀತಿ ಗಲಾಟೆ ತಗಾದೆಗಳ ನಡುವೆ ಸಾಲು ಸಾಲು ಹಲ್ಲೆ ಕೊಲೆ ಪ್ರಕರಣಗಳು ನಡೆಯುತಿದ್ದು, ಇದರ ನಡುವೆ ಇಂದು ತಂದೆಯನ್ನೇ ಕೊಲೆ ಮಾಡಿದ ಮಗ ಕೆಲ ಗಂಟೆ ಪೊಲೀಸರ ಮುಂದೆ ನಾಟಕವಾಡಿ ತಗಲಾಕಿಕೊಂಡಿದ್ದಾನೆ..

ಈತನೇ ನೋಡಿ ತಂದೆಯನ್ನೇ ಕೊಲೆ ಮಾಡಿ ಹೈಡ್ರಾಮಾ ಸೃಷ್ಟಿಸಿದ್ದ ಪುತ್ರ.. ಹೆಸರು ಚೇತನ್.. ಮಾಗಡಿರಸ್ತೆಯ ಗೊಪಾಲಪುರದ ಎರಡನೇ ಕ್ರಾಸ್ ನಲ್ಲಿ ತನ್ನ ತಂದೆ, ತಾಯಿ ಹಾಗೂ ಸಹೋದರನ ಜೊತೆ ವಾಸವಿದ್ದಾನೆ.. ಕಾಂಟ್ರಾಕ್ಟ್ ಬೇಸ್ ನಲ್ಲಿ ಸ್ವೀಪರ್ ಆಗಿ ಕೆಲಸ ಮಾಡುತಿದ್ದ ಈತನಿಗೆ ತಂದೆ ತಾಯಿ ನಿಶ್ಚಯದಂತೆ ಮದುವೆ ಸಹ ಫಿಕ್ಸ್ ಆಗಿ ಎಂಗೇಜ್ಮೆಂಟ್ ಸಹ ಮುಗಿತ್ತು.. ಇನ್ನೇನು ಮದುವೆ ಸಹ ಆಗ ಬೇಕಿತ್ತು.. ಆದ್ರೆ ನೆನ್ನೆ ರಾತ್ರಿ ನಡೆದ ಜಗಳಕ್ಕೆ ತಂದೆ ರಾಜು ಮೇಲೆ ಸಿಟ್ಟಿಗೆದ್ದ ಮಗ ಬೆಳಗಿನ ಜಾವ ಒರಳು ಕಲ್ಲು ತಲೆಗೆ ಹಾಕಿ ಭೀಕರ ಹತ್ಯೆ ಮಾಡಿದ್ದಾನೆ..

ಹೌದು, ನೆನ್ನೆ ರಾತ್ರಿ ಮನೆಯಲ್ಲೇ ಇದ್ದ ತಂದೆ ರಾಜು ಮಧ್ಯರಾತ್ರಿ ೨ ಗಂಟೆ ಸುಮಾರಿಗೆ ಕಟ್ಟಡದ ಮೊದಲನೇ ಮಹಡಿಯ ಮನೆಯಿಂದ ಆಚೆ ಬಂದಿದ್ದನೆ.. ಬಳಿಕ ಮನೆಯ ಹೊರಾಂಡದಲ್ಲೇ ಮಲಿಗಿದ್ದಾನೆ.. ಆದ್ರೆ ಬೆಳಿಗ್ಗೆ ೫ ಗಂಟೆ ಸುಮಾರಿಗೆ ಬಂದ ಮಗ ಮಲಗಿದ್ದ ತಂದೆಯ ತಲೆಯ ಮೇಲೆ ಒರಳು ಕಲ್ಲು ಹಾಕಿ ಹತ್ಯೆ ಮಾಡಿದ್ದಾನೆ.. ನಂತರ ತನಗೇನು ಗೊತ್ತಿಲ್ಲ ಎಂಬಂತೆ ಮನೆಗೆ ತೆರಳಿ ಸ್ವಲ್ಪ ಸಮಯದ ನಂತರ ಬಂದು ಯೋರೊ ನನ್ನ ತಂದೆ ಹತ್ಯೆ ಮಾಡಿದ್ದಾರೆ ಅಂತ ಬಿಂಬಿಸಿದ್ದಾನೆ.. ಬಳಿಕ ತಾನೇ ಆಸ್ಪತ್ರೆಗೆ ಕರೆದೊಯ್ದು ಮೃತದೇಹವನ್ನ ಮನೆಗೆ ತಂದಿದ್ದಾನೆ.. ಇನ್ನು ಬೆಳಿಗ್ಗೆ ಏರಿಯಾದ ಜನರಿಂದ ಮಾಹಿತಿ ಪಡೆದ ಮಾಗಡಿರಸ್ತೆ ಪೊಲೀಸರು ಸ್ಥಳಕ್ಕೆ ಬಂದು ವಿಚಾರಿಸಿದಾಗ ಮಗನ ಮೇಲೆ ಅನುಮಾನ ಮೂಡಿದೆ.. ಬಳಿಕ ವಿಚಾರಣೆ ನಡೆಸಿದಾಗ ತಂದೆ ಕೊಲೆಯಲ್ಲಿ ಮಗನ ಕಳ್ಳಾಟ ಬಯಲಾಗಿದೆ..

ಇನ್ನು ತಂದೆಗೆ ಹೃದಯ ಸಂಬಂಧಿ ಸಮಸ್ಯೆ ಇತ್ತಂತೆ.. ಎಷ್ಟು ಹೇಳಿದರೂ ಕುಡಿತ ಬಿಟ್ಟಿರಲಿಲ್ಲವಂತೆ.. ಈ ವಿಚಾರವಾಗಿ ಆಗಾಗಿ ಮನೆಯಲ್ಲಿ ಜಗಳ ನಡೆಯುತಿದ್ದು, ಅದೇ ಕಾರಣಕ್ಕೆ ಕೊಲೆ ಮಾಡಿರೋ ಶಂಕೆ ಮೂಡಿದೆ.. ಸದ್ಯ ತಂದೆಯನ್ನೇ ಹತ್ಯೆ ಮಾಡಿದ ಮಗನ ಬಂಧಿಸಿದ ಮಾಗಡಿರಸ್ತೆ ಪೊಲೀಸರು ವಿಚಾರಣೆ ನಡೆಸುತಿದ್ದು, ಕೊಲೆಗೆ ಬೇರೆ ಕಾರಣ ಇತ್ತಾ ಅನ್ನೊದು ತನಿಖೆಯಿಂದಷ್ಟೇ ಹೊರ ಬರಬೇಕಿದೆ..

About Author

Leave a Reply

Your email address will not be published. Required fields are marked *

You may have missed