ಬೈಕ್ ಹಾಗೂ ಕಾರಿನ ನಡುವೆ ಅಪಘಾತ: ಬೈಕ್ ಸವಾರನಿಗೆ ಗಂಭೀರ ಗಾಯ

0

ಬೆಂಗಳೂರು: ಬೈಕ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಹಾಲಕ್ಷ್ಮಿ ಮೆಟ್ರೋ ಬಳಿ ಇರುವ ಗಣೇಶ ಮಂದಿರ ಬಳಿ ಮಾರುತಿ ಸುಜುಕಿ ಎರ್ಟಿಗಾ ಕಾರ್ ಗೆ ಪಲ್ಸರ್ 200 ಬೈಕ್ ಸವಾರ ಅತಿ ವೇಗದಿಂದ ಗುದ್ದಿದ ಪರಿಣಾಮ ಕಾರಿನ ಟಾಪ್ ಮೇಲೆ ಬೈಕ್ ಸವಾರ ಹಾರಿ ಬಿದ್ದಿದ್ದಾನೆ.

 

ಈ ಘಟನೆಯಿಂದ ಬೈಕ್ ಸವಾರ ಗಂಭೀರ ಗಾಯವಾಗಿದ್ದಾನೆ. ಗಾಯಗೊಂಡ 29 ವರ್ಷದ ಕಿರಣ್ ಕುಮಾರ್ ನಗರದ ನಂದ್ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಇನ್ನೂ ಘಟನೆಯಿಂದ ಬೈಕ್ ಸವಾರ ಯುವಕನ ತಲೆಗೆ ಕೈಗೆ ಬಲವಾಗಿ ಪೆಟ್ಟು ಬಿದ್ದಿದೆ. ಅಲ್ಲದೇ ಎಡಗೈಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

About Author

Leave a Reply

Your email address will not be published. Required fields are marked *

You may have missed