ಪ್ರಜೆಗಳೇ ಹಿಂದು ಅನ್ನೋದು ಬಿಜೆಪಿಗರಿಗೆ ಚುನಾವಣೆ ವಸ್ತು ಅಷ್ಟೇ: ರಾಜ್ಯ ಕಾಂಗ್ರೆಸ್
ಬೆಂಗಳೂರು: ಶೂ, ಧರಿಸಿ ಗೋಪೂಜೆ ಮಾಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನಡೆಯನ್ನು ಕಾಂಗ್ರೆಸ್ ಖಂಡಿಸಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಚಪ್ಪಲಿ ಹಾಕಿಕೊಂಡು ಗೋಪೂಜೆ ಮಾಡಬಹುದಾ? ಪ್ರಜೆಗಳೇ ಹಿಂದು ಅನ್ನೋದು ಬಿಜೆಪಿಗರಿಗೆ ಚುನಾವಣೆ ವಸ್ತು ಅಷ್ಟೇ’ ಎಂದು ಟ್ವೀಟ್ ಮಾಡಿದೆ.
ತುಮಕೂರಿನಲ್ಲಿ ಹಮ್ಮಿಕೊಂಡಿದ್ದ ತುಮಕೂರು ಮತ್ತು ಮಧುಗಿರಿ ಸಂಘಟನಾ ಜಿಲ್ಲೆಗಳ ಶಕ್ತಿ ಕೇಂದ್ರ ಪ್ರಮುಖರ ಸಭೆ ಉದ್ಘಾಟನೆ ವೇಳೆ ಜೆ.ಪಿ ನಡ್ಡಾ ಗೋಪೂಜೆ ನೆರವೇರಿಸಿದ್ದರು.
ಈ ವೇಳೆ ಅವರು ಶೂ ಧರಿಸಿದ್ದರು. ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿತ್ತು. ಈಗ ಆ ಫೋಟೊವನ್ನು ಕಾಂಗ್ರೆಸ್ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಬಿಜೆಪಿ ನಡೆಯನ್ನು ಪ್ರಶ್ನೆ ಮಾಡಿದೆ. ಇನ್ನೂ ಹಿಂದುತ್ವ, ಗೋಮಾತೆ, ಗೋರಕ್ಷಣೆ ಬಗ್ಗೆ ಮಾತನಾಡುವ, ಗೋವಿನ ಬಗ್ಗೆ ಪೂಜನೀಯ ಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದು ಹೇಳುವ ಬಿಜೆಪಿ ಈಗ ಮುಜುಗರಕ್ಕೀಡಾಗಿದೆ.