ಆಟೋದಲ್ಲಿ ಸಿಎಂ ಮನೆಗೆ ಬಂದ ಬಿರಿಯಾನಿ

0

ಬೆಂಗಳೂರು: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಸಚಿವ ಜಮೀರ್ ಅವರು ಸಿಎಂ ಅವರಿಗೆ ಭರ್ಜರಿ ಬಾಡೂಟ ಕಳುಹಿಸಿದ್ದಾರೆ. ಆದರೆ ಆಟೋ ರಿಕ್ಷಾದಲ್ಲಿ ಕಳುಹಿಸಲಾಗಿದ್ದ ಬಿರಿಯಾನಿಯನ್ನು (Biryani) ಸಿಎಂ ನಿವಾಸದೊಳಗೆ ತೆಗೆದುಕೊಂಡು ಹೋಗಲು ಪೊಲೀಸರು ಬಿಡದ ಹಿನ್ನೆಲೆ ಬೆಂಜ್ ಕಾರ್‌ನಲ್ಲಿ ಕೊಂಡೊಯ್ಯಲಾಗಿದೆ.

ಜಮೀರ್ ಅಹಮದ್ ಖಾನ್ ಅವರು ಹಬ್ಬದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರಿಗಾಗಿ ಆಟೋದಲ್ಲಿ ಬಿರಿಯಾನಿ ಕಳುಹಿಸಿದ್ದರು. ಸಿಎಂ ಸರ್ಕಾರಿ ನಿವಾಸದ ಬಳಿ ಆಟೋದಲ್ಲಿ ಬಂದ ಬಿರಿಯಾನಿಯನ್ನು ಅನುಮತಿ ಇಲ್ಲದೆ ಒಳಗೆ ಕೊಂಡುಹೋಗಲು ಬಿಡಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕೊನೆಗೂ ಬಿರಿಯಾನಿಯನ್ನು ಹೇಗಾದ್ರೂ ಮಾಡಿ ಸಿಎಂ ನಿವಾಸಕ್ಕೆ ಕಳುಹಿಸಲೇಬೇಕು ಎಂದು ಜಮೀರ್ ಬೆಂಬಲಿಗರು ಅದನ್ನು ಬೆಂಜ್ ಕಾರಿಗೆ ಶಿಫ್ಟ್ ಮಾಡಿದ್ದಾರೆ.

About Author

Leave a Reply

Your email address will not be published. Required fields are marked *

You may have missed