ಕುಡಿದ ಮತ್ತಿನಲ್ಲಿ ಬೈಕ್ ಸವಾರನಿಗೆ ಡಿಕ್ಕಿ
ಬೆಂಗಳೂರು ;– ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ದ್ವಿಚಕ್ರ ವಾಹನ ಸವಾರರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಪರಿಣಾಮ ಎದುರಿಗೆ ಬಂದ ಟಿಪ್ಪರ್ ಲಾರಿ ಕಾಲಿನ ಮೇಲೆ ಹರಿದು ಗಂಭೀರ ಗಾಯಗಳಾಗಿರುವ ಘಟನೆ ಆನೇಕಲ್ ತಾಲೂಕಿನ ದೊಡ್ಕೆರೆ ಬಿಳಿ ನಡೆದಿದೆ.
ಆನೇಕಲ್ ಸಿದ್ದನಪಾಳ್ಯ ಮೂಲದ ರೇಣುಕೇಶ್ ಅಪಘಾತದಲ್ಲಿ ಕಾಲು ಮುರಿದುಕೊಂಡ ವ್ಯಕ್ತಿ. ತಮಿಳುನಾಡು ಮೂಲದ ಚೆಲ್ವಾನ್ ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ವ್ಯಕ್ತಿ
ಹೌದು ಆನೇಕಲ್ ತಾಲೂಕಿನ ದೊಡ್ಕೆರೆ ಬಳಿ ಎರಡು ಬೈಕ್ ಗಳ ನಡುವೆ ಅಪಘಾತ ಸಂಭವಿಸಿದೆ ಆನೇಕಲ್ ಸಿದ್ದನ ಪಾಳ್ಯ ನಿವಾಸಿ ರೇಣುಕೇಶ್ ಕೆಲಸ ಮುಗಿಸಿ ಮನೆಗೆ ಹೋಗಲು ಆನೇಕಲ್ನಿಂದ ಸಿದ್ದನ ಪಾಳ್ಯಗೆ ಕಡೆ ಹೋಗುವಾಗ ದೊಡ್ಡ ಕೆರೆಯ ಸಮೀಪ ಕುಡಿದ ಮತ್ತಿನಲ್ಲಿ ಅತಿ ವೇಗವಾಗಿ ಬರುತ್ತಿದ್ದ ತಮಿಳುನಾಡು ಮೂಲದ ಚೆಲ್ವನ್ ರೇಣುಕೇಶ್ ಬೈಕ್ ಗೆ ಹಿಂಭಾದಿದಿಂದ ಡಿಕ್ಕಿ ಹೊಡೆದಿದ್ದಾನೆ. ಬಳಿಕ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ರೇಣುಕೇಶ್ ಮೇಲೆ ಎದುರಿಗೆ ಬರುತ್ತಿದ್ದ ಟಿಪ್ಪರ್ ಲಾರಿ ಕಾಲಿನ ಮೇಲೆ ಹರಿಸಿದ್ದಾನೆ .ಇನ್ನು ಘಟನೆ ಬಳಿಕ ಟಿಪ್ಪರ್ ಲಾರಿ ಚಾಲಕ ಪರಾರಿಯಾಗಿದ್ದಾನೆ