ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆ ವಿಚಾರ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದೇನು.?
ಬೆಂಗಳೂರು: ಏಪ್ರಿಲ್ 1 ರಿಂದ ದುಡಿಯುವ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಬಜೆಟ್ ನಲ್ಲಿ ಘೋಷಣೆ ಮಾಡಿ ಇದೀಗ ಮಾತು ತಪ್ಪಿದ ಸಿಎಂ ಬೊಮ್ಮಾಯಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ. ಈ ಸಂಬಂಧ ಸದಾಶಿವ ನಗರದಲ್ಲಿ ಮಾತನಾಡಿದ ಅವರು, ಸಿಎಂ ಯಾವಾಗಲೂ ಜನರಿಗೆ ಪೂಲ್ ಮಾಡೋ ಕೆಲಸ ಮಾಡ್ತಿದ್ದಾರೆ.
ದುಡಿಯುವ ಮಹಿಳೆಯರಿಗೆ ಪಾಸ್ ಕೊಡ್ತಿನಿ ಅಂದ್ರು, ಆದರೆ ಏಪ್ರಿಲ್ 1 ರಂದೇ ಜನರಿಗೆ ಫೂಲ್ ಮಾಡಿದರು. ಇನ್ನೂ ಸಿಂದಗಿ ಇಲೆಕ್ಷನ್ ಟೈಮಲ್ಲಿ ಕೋಲಿ ಸಮುದಾಯಕ್ಕೆ ಮೀಸಲಾತಿ ಕೊಡ್ತಿನಿ ಅಂದ್ರು ಆದ್ರೆ ಕೊಟ್ಟಿಲ್ಲಾ. ಅದಕ್ಕೆ ಬಾಬು ರಾವ್ ಚಿಂಚನಸೂರ್ ನಮ್ಮ ಪಾರ್ಟಿಗೆ ಬಂದ್ರು. ಮೀಸಲಾತಿ ವಿಚಾರದಲ್ಲಿ ಬೇರೆಯವರದ್ದು ಕಿತ್ತು ಕೊಡಿ ಅಂದಿಲ್ಲ.
ಜನಸಂಖ್ಯೆ ಆದರಿಸಿ ಕೊಡಬೇಕಿತ್ತು. ಅದ್ರಲ್ಲಿ ತಪ್ಪಿಲ್ಲ ಎಂದರು. ಇನ್ನೂ ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆ ವಿಚಾರವಾಗಿ ಮಾತನಾಡಿ, ಸಿಇಸಿ ಮೀಟಿಂಗ್ ನಾಲ್ಕನೇ ತಾರೀಖಿದೆ. ಅದಕ್ಕೆ ಮಲ್ಲಿಕಾರ್ಜುನ ಖರ್ಗೆ ಸಹಿ ಹಾಕಬೇಕು. ಆಮೇಲೆ ತೀರ್ಮಾನ ಆಗುತ್ತದೆ ಎಂದರು. ಇನ್ನೂ ಟಿಕೆಟ್ ವಿಚಾರದಲ್ಲಿ ಬಂಡಾಯ ವಿಚಾರವಾಗಿ ಮಾತನಾಡಿ, ಬಂಡಾಯ ಇಲ್ಲ. ಆಕಾಂಕ್ಷಿಗಳು ಹೆಚ್ಚಿದ್ದಾರೆ. ಯಾವುದೇ ಬ್ಲ್ಯಾಕ್ ಮೇಲ್ ಗೆ ಹೆದರಲ್ಲ. ಜನತಾದಳ, ಬಿಜೆಪಿಯಲ್ಲಿ ಬಂಡಾಯವಿದೆ ಎಂದರು.