ದಾಸರಹಳ್ಳಿಯಲ್ಲಿ ಡಿಕೆ ಶಿವಕುಮಾರ್ ಬೆಂಬಲಿಗ ಧನಂಜಯ್ ಗೆ ಒಲಿದ ಟಿಕೆಟ್..!
ಬೆಂಗಳೂರು: ದಾಸರಹಳ್ಳಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬೆಂಬಲಿಗ ಧನಂಜಯ್ ಗೆ ಟಿಕೆಟ್ ಒಲಿದಿದೆ. ಕ್ಷೇತ್ರದಲ್ಲಿ ಐದಾರು ಜನ ಆಕಾಂಕ್ಷಿಗಳ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಬಿಜೆಪಿಯಿಂದ ಬಂದಿರುವ ಧನಂಜಯ್ ಗೆ ಟಿಕೆಟ್ ನೀಡದಂತೆ ಆಕಾಂಕ್ಷಿಗಳು ಒತ್ತಾಯಿಸಿದ್ದರು.
ಆದರೂ ತಮ್ಮ ಬೆಂಬಲಿಗನಿಗೆ ಟಿಕೆಟ್ ಕೊಡಿಸುವಲ್ಲಿ ಡಿಕೆಶಿ ಯಶಸ್ವಿಯಾಗಿದ್ದಾರೆ.
ಇನ್ನೂ ಮತ್ತೊಂದೆಡೆ ಚಿಕ್ಕಪೇಟೆಗೆ ಬಲಿಜ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ಲಭಿಸಿದೆ. ಲಿಂಗಾಯತ ಸಮುದಾಯಕ್ಕೆ ಟಿಕೆಟ್ ನೀಡುವಂತೆ ವೀರಶೈವ ಮಹಾಸಭಾ ಬೇಡಿಕೆ ಇಟ್ಟಿತ್ತು. ಅಲ್ಲದೇ ಮಾಜಿ ಮೇಯರ್ ಗಂಗಾಂಬಿಕೆಗೆ ಟಿಕೆಟ್ ನೀಡುವಂತೆ ಒತ್ತಾಯ ಕೇಳಿ ಬಂದಿತ್ತು. ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಅವ್ರಿಂದಲೂ ಒತ್ತಾಯ ಬಂದಿತ್ತು. ಆದರೆ,ಆರ್.ವಿ ದೇವರಾಜ್ ಗೆ ಟಿಕೆಟ್ ನೀಡುವ ಮೂಲಕ ಬಲಿಜ ಸಮುದಾಯಕ್ಕೆ ಕಾಂಗ್ರೆಸ್ ಮಣೆ ಹಾಕಿದೆ.