ಬೆಂಗಳೂರಿನಲ್ಲಿ ಮುಂದುವರೆದ ಗಿಫ್ಟ್ ಪಾಲಿಟಿಕ್ಸ್..! ಸೀರೆ ಅರಿಶಿಣ ಕುಂಕುಮ ವಿತರಣೆ
ಬೆಂಗಳೂರು: 2023 ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಹಿನ್ನೆಲೆ ಮತದಾರರ ಮನವೊಲಿಕೆಗೆ ಇನ್ನಿಲ್ಲದ ತಯಾರಿ ನಡೆಸಿದ್ದಾರೆ. ಅದರ ಭಾಗವಾಗಿ ಬೆಂಗಳೂರಿನಲ್ಲಿ ಗಿಫ್ಟ್ ಪಾಲಿಟಿಕ್ಸ್ ಶುರುವಾಗಿದ್ದು, ಗಿಫ್ಟ್ ನೀಡೋದ್ರಲ್ಲಿ ರಾಜಕಾರಣಿಗಳು, ಪೈಪೋಟಿಗೆ ಬಿದ್ದಿದ್ದಾರೆ.
ಚಿಕ್ಕಪೇಟೆ ಮಾಜಿ ಶಾಸಕ ಆರ್.ವಿ ದೇವರಾಜ್ ಅವರು ಮಹಿಳೆಯರಿಗೆ ಸೀರೆ,
ಅರಿಶಿಣ ಕುಂಕುಮ, ವಿತರಣೆ ಮಾಡಿದ್ದು, ಮಹಿಳಾ ಮತದಾರರನ್ನು ಸೆಳೆಯಲು ಆರ್ ವಿದೇವರಾಜ್ ಮುಂದಾಗಿದ್ದಾರೆ. ಜೆಸಿ ರಸ್ತೆಯ ತಮ್ಮ ಕಚೇರಿ ಮುಂಭಾಗದಲ್ಲಿ ಮತದಾರರನ್ನು ಕರೆಸಿ ಸೀರೆ, ಕುಕ್ಕರ್, ಹಾಟ್ ಬಾಕ್ಸ್, ಅಕ್ಕಿ ವಿತರಣೆ ಮಾಡಿದ್ದಾರೆ. ಬರೋಬ್ಬರಿ 35 ಸಾವಿರ ಸೀರೆ ಹಂಚಿ ಆರ್ ವಿ ದೇವರಾಜ್ ಅವರು ಮತ ಭೇಟೆ ನಡೆಸಿದ್ದಾರೆ.