ಸೋಮಣ್ಣ ನೇತೃತ್ವದಲ್ಲಿ ಗೋವಿಂದರಾಜನಗರ ಅಭಿವೃದ್ಧಿಯಾಗಿದೆ: BJP ಅಭ್ಯರ್ಥಿ ಉಮೇಶ್ ಶೆಟ್ಟಿ
ಬೆಂಗಳೂರು: ವಸತಿ ಸಚಿವ ವಿ ಸೋಮಣ್ಣ ನೇತೃತ್ವದಲ್ಲಿ ಗೋವಿಂದರಾಜ ನಗರ ಅಭಿವೃದ್ಧಿಯಾಗಿದೆ ಎಂದು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಶೆಟ್ಟಿ ಹೇಳಿಕೆ ನೀಡಿದ್ದಾರೆ. ಗೋವಿಂದರಾಜ ನಗರದಲ್ಲಿ ಇಂದು ತಮ್ಮ ಅಪಾರ ಅಭಿಮಾನಿಗಳು ಮತ್ತು ಕಾರ್ಯಕರ್ತರ ಜೊತೆ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಸೋಮಣ್ಣನವರ ಆಶಿರ್ವಾದದೊಂದಿಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ.
ಇನ್ನೂ ಸೋಮಣ್ಣ ಅವರು ಚಾಮರಾಜನಗರ ವರುಣ ದಲ್ಲಿ ಸ್ಪರ್ದೆ ಮಾಡ್ತಿದ್ದಾರೆ. ಪಕ್ಷದ ಒಬ್ಬ ಅಸಮಾನ್ಯ ಕಾರ್ಯಕರ್ತ ಆದ ನನಗೆ ಅಭ್ಯರ್ಥಿಯನ್ನಾಗಿ ಮಾಡಿದೆ.
ಗೋವಿಂದರಾಜ ನಗರ ಕ್ಷೇತ್ರ ಅಬಿವೃದ್ದಿ ಪರ್ವ, ವಿಜಯ ಸಾದುಸ್ತಿನಿ ಎಂಬ ವಿಶ್ವಾಸ ಇದೆ ಎಂದರು. ಇನ್ನೂ ಸೋಮಣ್ಣ ನೇತೃತ್ವದಲ್ಲಿ ಗೋವಿಂದರಾಜ ನಗರ ಅಭಿವೃದ್ಧಿಯಗಿದೆ. ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಸಿಕ್ಕಿರುವುದು ಖುಷಿಯ ವಿಚಾರ ಎಂದರು. ಇನ್ನೂ ಇದೇ ವೇಳೆ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿ, ಈ ಬಗ್ಗೆ ಮಾತಾಡುವಷ್ಟು ದೊಡ್ಡ ವ್ಯಕ್ತಿಯಲ್ಲ ನಾನು. ಇದು ಕಾರ್ಯಕರ್ತರ ಪಾರ್ಟಿ. ಜಗದೀಶ್ ಶೆಟ್ಟರ್ ನಮ್ಮ ನಾಯಕರು.