ಸಂಸದ ಮುನಿಸ್ವಾಮಿ ಮೊದಲನೇ ಹುಚ್ಚಾ ವೆಂಕಟ್‌ – ಪ್ರದೀಪ್‌ ಈಶ್ವರ್‌

0

ಬೆಂಗಳೂರು ;– ಪ್ರದೀಪ್‌ ಈಶ್ವರ್‌ ಹುಚ್ಚ ವೆಂಕಟ್ ಪಾರ್ಟ್ – 2 ಎಂಬ ಸಂಸದ ಮುನಿಸ್ವಾಮಿ ಹೇಳಿಕೆಗೆ ಪ್ರದೀಪ್‌ ಈಶ್ವರ್‌ ತಿರುಗೇಟು ನೀಡಿದ್ದಾರೆ.

ಕೋಲಾರ ಎಂಪಿ ಆಗಿರುವ ಅವರ ಹೆಸರು ಏನು ಸರ್‌? ‘ಮೆಂಟಲ್‌ ಮುನಿಸ್ವಾಮಿ’ ಅಂತಾ ಅವರ ಹೆಸರು.

ನಾನು ಹೇಳಿದೆ, ಅಂತಾ ಆ ರೀತಿಯಲ್ಲಿ ಯಾರೂ ಹೇಳಬಾರದು. ಅವರ ಮೇಲೆ ಕೇಸ್‌ಗಳು ಇದ್ದಾವೆ. ನಾನು ದಾಖಲೆ ಇಟ್ಟುಕೊಂಡು ಮಾತನಾಡುತ್ತೇನೆ. ಅವರೊಬ್ಬ ರೌಡಿ ಶೀಟರ್‌ ಆಗಿದ್ದಾರೆ ಎಂದು ಪ್ರದೀಪ್‌ ಈಶ್ವರ್‌ ಹೇಳಿದ್ದಾರೆ.

ನಮ್ಮ ನಾಯಕರ ಬಗ್ಗೆ ಮುನಿಸ್ವಾಮಿ ಮಾತನಾಡುತ್ತಾರೆ. ನಿಮ್ಮ ರೌಡಿ ಶೀಟರ್‌ ಬಗ್ಗೆ ನೀವು ಮಾತನಾಡಿ. ವೈಟ್‌ಫೀಲ್ಡ್‌ನಲ್ಲಿ ಕಂಪೌಂಡ್‌ ಹಾಕಿದ್ದಾರೆ. ಅದಕ್ಕೆ ಕೇಸ್‌ ಆಗಿದೆ. ಅದರ ಬಗ್ಗೆ ಬಿಜೆಪಿ ಮಾತನಾಡಲಿ ಎಂದಿದ್ದಾರೆ.

ರಾಜ್ಯದ ಎಂಪಿಗಳು ಸರ್ಕಾರದ ಪರವಾಗಿ ಇರಬೇಕು. ಕೇಂದ್ರದ ಜೊತೆ ಮಾತನಾಡಿ ಅಕ್ಕಿ ಕೊಡಿಸಬೇಕು. ಅದುಬಿಟ್ಟು ರಾಜಕೀಯ ಮಾತನಾಡುತ್ತಿದ್ದಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ರಾಜ್ಯದ ಎಂಪಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ಬಡವರ ಹೊಟ್ಟೆ ಮೇಲೆ ಇವರೆಲ್ಲಾ ಸೇರಿ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ನಾನು ಯಾರನ್ನೂ ಪರ್ಸನಲ್‌ ಆಗಿ ಟಾರ್ಗೆಟ್‌ ಮಾಡೋದಿಲ್ಲ. ನೀವು ಮಾತನಾಡಿದ್ರೆ ನಾವು ಮಾತನಾಡುತ್ತೇವೆ. ಚೈಲ್ಟ್‌ ಆರ್ಟಿಸ್ಟ್‌ ಥರ ಎಂಪಿ ಆಡ್ತಾರೆ. ಎಂಪಿ ಅಂದರೆ, ಗಾಂಭಿರ್ಯ ಇರಬೇಕು. ನಾನು‌ ಮಾಡಿರುವ ಆರೋಪಕ್ಕೆ ಉತ್ತರ ನೀಡಿ. ನನ್ನ ಕರೆಯೋಕೆ ಹೇಳಿ‌ ನಾನು ರಾಜಕೀಯ ಪಾಠ ಮಾಡುತ್ತೇನೆ ಎಂದು ಪ್ರದೀಪ್‌ ಈಶ್ವರ್‌ ಹೇಳಿದ್ದಾರೆ.

ನಾನು ಯಾರನ್ನೂ ‌ಸೋಲಿಸಿದ್ದು ಅನ್ನೋದು ಗೊತ್ತಲ್ವ? ಇಷ್ಟು ಬಿಜೆಪಿ ಸಂಸದರಿಗೆ ಸ್ವತಃ ಬಲದ ಮೇಲೆ ಗೆಲ್ಲುವ ಸಾಮರ್ಥ್ಯ ಇಲ್ಲ. ಮೋದಿ‌ ಹೆಸರು ಹೇಳಿಕೊಂಡು ಹೋಗ್ತಾರೆ. ಈ ಬಾರಿ ಸ್ವತಃ ಸಾಮರ್ಥ್ಯದ ಮೇಲೆ ಚುನಾವಣೆ ಮಾಡಲಿ ಎಂದು ಎಂಪಿಗಳಿಗೆ ಪ್ರದೀಪ್‌ ಈಶ್ವರ್‌ ಸವಾಲು ಹಾಕಿದ್ದಾರೆ.

About Author

Leave a Reply

Your email address will not be published. Required fields are marked *

You may have missed