ಮಾರ್ಚ್ 26ರಂದು ಸಾಹಸ ಸಿಂಹ ವಿಷ್ಣುವರ್ಧನ್ ಕಂಚಿನ ಪ್ರತಿಮೆ ಉದ್ಘಾಟನೆ

0

ಕೆ.ಆರ್. ಪುರ: ಸಾಹಸಿಂಹ ಡಾ.ವಿಷ್ಣುವರ್ಧನ್ ಅಭಿಮಾನಿಗಳ ಒಕ್ಕೂಟದಿಂದ ಮಾ.26 ರಂದು ಬೆಳಗ್ಗೆ10.30 ಕ್ಕೆ ಕೆ ಆರ್ ಪುರದ ವೆಂಗಯ್ಯನ ಕೆರೆ ಬಳಿ ಸಾಹಸಿಂಹ ವಿಷ್ಣುವರ್ಧನ್ ರವರ ಕಂಚಿನ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಎಲ್ ಐಸಿ ವೆಂಕಟೇಶ್ ತಿಳಿಸಿದರು.

 

ವೆಂಗಯ್ಯನ ಕೆರೆ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜರವರು ಪ್ರತಿಮೆ ಉದ್ಘಾಟಿಸಲಿದ್ದು ಭಾರತಿ ವಿಷ್ಣುವರ್ಧನ್ , ಅನಿರುದ್ಧ ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಉದ್ಘಾಟನೆ ದಿನ ಬೆಳಗ್ಗೆ 8 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಈ ಕಾರ್ಯಕ್ರಮಕ್ಕೆ ಡಾ.ರಾಜ್ ಕುಮಾರ್ ಅಭಿಮಾನಿ ಬಳಗ ಸಾಥ್ ನೀಡುತ್ತಿದ್ದು ವಿಷ್ಣುವರ್ಧನ್ ಅಭಿಮಾನಿಗಳು ರಾಜ್ಯದ ಮೂಲೆ ಮೂಲಡಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಾದು, ಕೆಂಪಣ್ಣ, ಅಫ್ರೋಜ್, ಬಾಬು, ದಿಲೀಪ್ ಪಾಪಣ್ಣ, ಜಾಕೀರ್, ರಾಮಣ್ಣ, ಪ್ರಕಾಶ್ , ಡಿ ಕಂಪನಿ‌ ಅಧ್ಯಕ್ಷ ರಾಕಿ ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

You may have missed