ನೂತನ ಬಸ್ ಗಳಿಂದ KSRTC ಖಜಾನೆಗೆ ಕೋಟಿ ಕೋಟಿ ಆದಾಯ..!
ಬೆಂಗಳೂರು: ಬೆಂಗಳೂರು ಸೇರಿ ರಾಜ್ಯದಲ್ಲಿ ಅಂಬಾರಿ ಉತ್ಸವ್ ಬಸ್ (Ambaari Utsav Bus)ಗಳಿಂದ ಕೆಎಸ್ ಆರ್ ಟಿಸಿ(KSRTC) ಖಜಾನೆಗೆ ಕೋಟಿ ಕೋಟಿ ಆದಾಯ ಹರಿದು ಬಂದಿದೆ. ಅಂಬಾರಿ ಉತ್ಸವ್ ಬಸ್ ಗಳಿಂದ ಕಳೆದ ಎರಡೇ ತಿಂಗಳಲ್ಲಿ 3.5 ಕೋಟಿ ಆದಾಯ ಗಳಿಕೆ ಆಗಿದೆ.
ಕೆಎಸ್ ಆರ್ ಟಿಸಿ ನಿಗಮವು ಪ್ರತೀ ಕಿ.ಮೀ ಗೆ 76 ರೂ ಗಳಿಕೆ ಮಾಡುತ್ತಿದ್ದು, ಹೆಚ್ಚಿನ ಆದಾಯ ಗಳಿಕೆ ಹಿನ್ನೆಲೆ ಕೆಎಸ್ ಆರ್ ಟಿಸಿ ನಿಗಮ ಫುಲ್ ಖುಷ್ ಆಗಿದೆ. ದಿನೇ ದಿನೇ ಹೆಚ್ಚಿನ ಪ್ರಯಾಣಿಕರನ್ನ ನೂತನ ಯೂರೋಪಿಯನ್ ಮಾದರಿಯ ಬಸ್ ಸೆಳೆಯುತ್ತಿದ್ದು ಪ್ರತೀ ನಿತ್ಯದ ಬಸ್ ಸಂಚಾರದಲ್ಲಿ ಫುಲ್ ಲೋಡ್ ನಲ್ಲಿ ಅಂಬಾರಿ ಉತ್ಸವ ಸಂಚಾರ ಮಾಡ್ತಿದೆ.
ಇತ್ತೀಚೆಗಷ್ಟೇ ಕೆಎಸ್ ಆರ್ ಟಿಸಿಗೆ ಅಂಬಾರಿ ಉತ್ಸವ್ ಬಸ್ ಕಾಲಿಟ್ಟಿತು. ಮಲ್ಟೀ ಆಕ್ಸಲ್ ಮತ್ತು ಆರಾಮದಾಯಕ ಪ್ರಯಾಣಕ್ಕೆ ಅಂಬಾರಿ ಉತ್ಸವ್ ಬಸ್ ಸೂಕ್ತವಾಗಿದ್ದು, ದೂರದ ಪ್ರಯಾಣಿಕರಿಗೆ ಈ ಬಸ್ ಹೇಳಿ ಮಾಡಿಸಿದ ಹಾಗಿದೆ. ರಾಜ್ಯ ಹಾಗೂ ಅಂತರರಾಜ್ಯ ಗಳಿಗೆ ಈ ಬಸ್ ಗಳು ಸೇವೆ ಸಲ್ಲಿಸುತ್ತಿದ್ದು ರಾಜ್ಯದ ವಿವಿದೆಡೆ ಸೇರಿ ಎರ್ನಾಕುಲಂ ಭಾಗದಲ್ಲಿ ಒಟ್ಟು 15 ಬಸ್ ಗಳು ಕಾರ್ಯಚರಣೆ ಮಾಡುತ್ತಿವೆ. ಇನ್ನೂ ಕೆಲವೇ ತಿಂಗಳುಗಳಲ್ಲಿ 30 ನೂತನ ಬಸ್ ಗಳನ್ನ ಕೆಎಸ್ ಆರ್ಟಸಿ ನಿಗಮವು ಪರಿಚಯಿಸಲು ಮುಂದಾಗಿದೆ.
ಈ ಬಸ್ ಗಳ ಸಂಚಾರ ಎಲ್ಲೆಲ್ಲಿ ಗೊತ್ತಾ..!?
ಬೆಂಗಳೂರು ಟು ಮೈಸೂರು
ಬೆಂಗಳೂರು to ಮುರುಡೇಶ್ವರ
ಬೆಂಗಳೂರು ಟು ಕುಂದಾಪುರ
ಬೆಂಗಳೂರು ಟು ಹೈದರಾಬಾದ್
ಬೆಂಗಳೂರು ಟು ಎರ್ನಾಕುಲಂ
ಬೆಂಗಳೂರು ಟು ತಿರುವನಂತಪುರಂ
ಬೆಂಗಳೂರು ಟು ತ್ರಿಶೂರ್
ಬೆಂಗಳೂರು ಟು ಗೋವಾ, ಪಣಜಿ