ಆಂಟಿ ಅಂಕಲ್ ಲವ್ ಸ್ಟೋರಿ ಕೇಳಿ ಪೊಲೀಸರೇ ತಬ್ಬಿಬ್ಬು!
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಿಚಿತ್ರ ಲವ್ ಸ್ಟೋರಿ ಬಯಲಾಗಿದೆ. ಅಕ್ರಮ ಸಂಬಂಧ ಒಲ್ಲೆ ಎಂದ ಮಹಿಳೆಯನ್ನು ಪ್ರಿಯಕರ ಕೊಲೆಗೆ ಯತ್ನ ಮಾಡಿದ್ದಾನೆ. ಆಂಟಿ ಅಂಕಲ್ ಲವ್ ಸ್ಟೋರಿ ಕೇಳಿ ಪೊಲೀಸರೇ ತಬ್ಬಿಬ್ಬಾಗಿದ್ದಾರೆ. ಆಂಟಿಯನ್ನು ಬಿಟ್ಟಿರಲಾರೆ ಎಂದು ಆರೋಪಿಯಾದ ಅಂಕಲ್ ಈಗಲೂ ಪಟ್ಟು ಹಿಡಿದು ಕೂತಿದ್ದಾನೆ.
4 ವರ್ಷಗಳಿಂದ ರಾಜು ಎಂಬಾತ ಗಂಗಮ್ಮ ಎಂಬುವರೊಂದಿಗೆ ಸಂಬಂಧದಲ್ಲಿದ್ದ. ಅದ್ಯಾಕೋ ಇವ್ನ ಸಹವಾಸ ಸಾಕಾಗಿ. ಸಂಬಂಧ ಬಿಟ್ಟುಬಿಡೋಣ ಅಂತ ಗಂಗಮ್ಮ ಪದೇ ಪದೇ ರಾಜುಗೆ ದುಂಬಾಲು ಬಿದ್ದಿದ್ಲಂತೆ. ಗಂಗಮ್ಮ ಮಾತಿಗೆ ಕೆಂಡಾಮಂಡಲನಾದ ರಾಜು ನಿನ್ನ ಬಿಟ್ಟು ನಾನಿರಲಾರೆ ನೀನು ನನಗೆ ಬೇಕೇ ಬೇಕು ಎಂದು ಹಠಕ್ಕೆ ಬಿದ್ದಿದ್ನಂತೆ.
ಬೇಸತ್ತ ರಾಜು ನಂಬರ್ ಅನ್ನು ಗಂಗಮ್ಮ ಬ್ಲಾಕ್ ಮಾಡಿದ್ಲು. ಇದ್ರಿಂದ ಸಿಟ್ಟಿಗೆದ್ದ ರಾಜು, ಗಂಗಮ್ಮ ಕೆಲಸ ಮಾಡುವ ಶಾಲೆ ಬಳಿ ತೆರಳಿ ನಿನ್ನ ಸಾಯಿಸಿ ತಾನೂ ಸಾಯಿಸೋದಾಗಿ ಬೆದರಿಕೆ ಹಾಕಿದ್ದ. ಬಳಿಕ ಇಬ್ಬರೂ ಮಾತಾಡಿಕೊಂಡು ಯಲಚೇನಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಬಂದಿದ್ರು. ಈ ವೇಳೆ ನೀನು ನನಗೆ ಸಹಕರಿಸದೇ ಇದ್ರೆ ಇರೋದೇ ಬೇಡ ಎಂದು ಹೊಟ್ಟೆಗೆ ಇರಿಯಲು ಯತ್ನಿಸಿದ್ದಾನೆ. ಎಡಗೈಯಿಂದ ಚಾಕುವನ್ನು ಹಿಡಿದ ಗಂಗಮ್ಮ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ. ಈ ವೇಳೆ ಗಂಗಮ್ಮ ನಿಂದ ಚಾಕು ಕಿತ್ತುಕೊಂಡು ಎಡ ಭುಜಕ್ಕೆ ಕೆನ್ನೆಗೆ ಹೊಡೆದು ಕೊಲೆ ಯತ್ನ ನಡೆಸಿದ ರಾಜು ಓಡಿ ಹೋಗಿದ್ದಾನೆ. ಸ್ಥಳೀಯ ಆಸ್ಪತ್ರೆಯಲ್ಲಿ ಗಂಗಮ್ಮಗೆ ಚಿಕಿತ್ಸೆ ಕೊಡಿಸಲಾಗ್ತಿದೆ. ಕೃತ್ಯ ಸಂಬಂಧ ಕೋಣನಕುಂಟೆ ಠಾಣೆಯಲ್ಲಿ ದೂರು ದಾಖಲಾಗಿದೆ.