ಭಾರತದಲ್ಲಿ ಮುಸ್ಲಿಮರು ಭಯಪಡುವ ಅಗತ್ಯ ಇಲ್ಲ: ಮೋಹನ್ ಭಾಗವತ್
ನವದೆಹಲಿ: ಭಾರತದಲ್ಲಿ ಮುಸ್ಲಿಮರು ಭಯಪಡಲು ಏನೂ ಇಲ್ಲ, ಆದರೆ ಅವರು ತಮ್ಮ ‘ಶ್ರೇಷ್ಠತೆಯ ಉದ್ರೇಕಕಾರಿ ವಾಕ್ಚಾತುರ್ಯ’ವನ್ನು ತ್ಯಜಿಸಬೇಕು ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಆರ್ಗನೈಸರ್ ಮತ್ತು ಪಾಂಚಜನ್ಯಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಭಾಗವತ್ ಅವರು ಇದೇ ವೇಳೆ ಎಲ್ಜಿಬಿಟಿ ಸಮುದಾಯವನ್ನು ಬೆಂಬಲಿಸಿ ಅವರೂ ಸಹ ತಮ್ಮದೇ ಆದ ಖಾಸಗಿ ಸ್ಥಳವನ್ನು ಹೊಂದಿರಬೇಕು ಮತ್ತು ಸಂಘವು ಈ ದೃಷ್ಟಿಕೋನವನ್ನು ಉತ್ತೇಜಿಸಬೇಕು ಎಂದು ಹೇಳಿದರು.