ಭ್ರಷ್ಟಾಚಾರ ಹಾಗೂ ರಾಜಕೀಯ ವಖ್ಫ್ ವಿಚಾರದಲ್ಲಿ ಸಹಿಸಲ್ಲ – ಸಚಿವ ಜಮೀರ್
ಬೆಂಗಳೂರು:- ವಖ್ಫ್ ವಿಚಾರದಲ್ಲಿ ಭ್ರಷ್ಟಾಚಾರ ಹಾಗೂ ರಾಜಕೀಯ ಸಹಿಸಲ್ಲ ಎಂದು ಅಧಿಕಾರಿಗಳಿಗೆ ಸಚಿವ ಜಮೀರ್ ಅಹಮದ್ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಖ್ಫ್ ಬೋರ್ಡ್ ನಲ್ಲಿ ಕೆಲಸ ಮಾಡುವುದು ಎಂದರೆ ದೇವರ ಕೆಲಸ.
ಇಲ್ಲಿ ಸಮುದಾಯದ ಹಿತ ಮುಖ್ಯವಾಗಬೇಕೆ ಹೊರತು ರಾಜಕೀಯ ಅಲ್ಲ. ಇಲ್ಲಿಯೂ ಹಣ ಮಾಡಲು ಹೊರಟರೆ ನಿರ್ನಾಮ ಆಗುತ್ತಾರೆ. ನಾವೆಲ್ಲರೂ ದೇವರಿಗೆ ಉತ್ತರಿಸಬೇಕಾಗುತ್ತದೆ ಎಂದು ಹೇಳಿದರು.
ಹಣ ಗಳಿಸಬೇಕು ಎಂಬ ಮನಸ್ಥಿತಿ ಇರುವವರು ಇಲ್ಲಿ ಬರುವುದು ಬೇಡ. ಬೇರೆ ಯಾವುದಾದರೂ ಕಡೆ ಹೋಗಲಿ. ಸಚಿವರು, ಅಧ್ಯಕ್ಷರಿಗಿಂತ ಇಲ್ಲಿ ಕೆಲಸ ಮಾಡುವ ಅಧಿಕಾರಿಗಳ ಜವಾಬ್ದಾರಿ ದೊಡ್ಡದು ಎಂದು ತಿಳಿಸಿದರು.
ವಖ್ಫ್ ಆಸ್ತಿ ಸಂರಕ್ಷಣೆ ದೃಷ್ಟಿಯಿಂದ ಕಾರ್ಯಪಡೆ ರಚನೆ, ಕಾಂಪೌಂಡ್ ನಿರ್ಮಾಣ ಸೇರಿ ಹಲವು ಕ್ರಮಗಳಿಗೆ ಮುಂದಾಗಿದ್ದೇವೆ. ನಮ್ಮ ಆಸ್ತಿ ಸಂರಕ್ಷಣೆ ಮಾಡಿಕೊಂಡರೆ ಸರ್ಕಾರದ ಮುಂದೆ ಅನುದಾನಕ್ಕೆ ಕೈ ಚಾಚುವ ಬದಲು ನಾವೇ ಸರ್ಕಾರಕ್ಕೆ ದೇಣಿಗೆ ಕೊಡುವ ಶಕ್ತಿ ಬರುತ್ತದೆ ಎಂದು ಹೇಳಿದರು.