ರೈತರು ತಮ್ಮ ಎತ್ತು, ಗಾಡಿಗಳನ್ನೇ ಲಂಚವಾಗಿ ನೀಡುವ ಪರಿಸ್ಥಿತಿ: ಕಾಂಗ್ರೆಸ್ ಕಿಡಿ

0

ಬೆಂಗಳೂರು: ಬಿಜೆಪಿಯಿಂದ ರೈತರು ತಮ್ಮ ಎತ್ತು, ಗಾಡಿಗಳನ್ನೇ ಲಂಚವಾಗಿ ನೀಡುವ ಪರಿಸ್ಥಿತಿ ಬಂದಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಸಿಎಂ ಬೊಮ್ಮಾಯಿ ತವರು ಜಿಲ್ಲೆಯ ರೈತ ಎತ್ತುಗಳನ್ನೇ ಲಂಚವಾಗಿ ನೀಡಲು ತಂದಿದ್ದಾರೆ.

ಬಿಜೆಪಿಯ ಕಡುಭ್ರಷ್ಟ ಸರ್ಕಾರದ ಪರವಾಗಿ ಯಾವ ಮುಖವಿಟ್ಟುಕೊಂಡು ಮತ ಕೇಳುವಿರಿ? ಪ್ರಧಾನಿ ಮೋದಿ ಅವರೇ,

ನಿಮ್ಮ ಎರಡನೇ ಇಂಜಿನ್ ಸರ್ಕಾರದ ಲಂಚಾವತಾರವು ರೈತರನ್ನು ಎತ್ತು, ಗಾಡಿಗಳನ್ನೇ ಲಂಚ ನೀಡುವ ಹಂತಕ್ಕೆ ತಂದಿದೆ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ಕುಟುಕಿದೆ. ಮೋದಿ ಅವರೇ ನಿಮ್ಮನ್ನು ಸ್ವಾಗತಿಸಲು ಧಿಡೀರ್ ಹಾಜರಾಗಿದ್ದ ಉರಿಗೌಡ, ದೊಡ್ಡನಂಜೇಗೌಡ ಎಂಬ ಫಿಕ್ಷನ್ ಕ್ಯಾರೆಕ್ಟರ್ಗಳು ರಾತ್ರೋರಾತ್ರಿ ಎಲ್ಲಿ ಹೋದರು ಎಂದು ಒಮ್ಮೆ ಸಿಟಿ ರವಿ ಅವರನ್ನು ವಿಚಾರಿಸಿ , ಬಿಜೆಪಿ ನಾಯಕರ ನಕಲಿತನ, ಸುಳ್ಳು, ಆತ್ಮವಂಚನೆ, ಡೋಂಗಿತನ ಎಲ್ಲವಕ್ಕೂ ಮೋದಿಯವರೇ ಪ್ರೇರಣೆಯೇ? ಎಂದು ಟ್ವೀಟ್ ಮಾಡಿದೆ.

About Author

Leave a Reply

Your email address will not be published. Required fields are marked *

You may have missed