ಎಸ್.ಎಂ. ಕೃಷ್ಣ ಸಹೋದರಿ ಮನೆ ಮೇಲೆ IT ಅಧಿಕಾರಿಗಳ ದಾಳಿ..!

0

ಬೆಂಗಳೂರು: ವಿಧಾನಸಭಾ ಚುನಾವಣೆಯ (Karnataka Election 2023) ಹಿನ್ನೆಲೆಯಲ್ಲಿ ನಡೆಯುತ್ತಿದೆ ಎಂದು ಹೇಳಲಾದ ಆದಾಯ ತೆರಿಗೆ ಅಧಿಕಾರಿಗಳ ದಾಳಿಯ ಬಿಸಿ ಇದೀಗ ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ (Former CM SM Krishna) ಅವರ ಸಹೋದರಿಗೂ ತಟ್ಟಿದೆ.

ಬೆಂಗಳೂರಿನ ಕೋರಮಂಗಲದ ಫಸ್ಟ್‌ ಬ್ಲಾಕ್‌ನಲ್ಲಿ ವಾಸವಾಗಿರುವ ಎಸ್‌.ಎಂ. ಕೃಷ್ಣ ಅವರ ಸಹೋದರಿ ಎಸ್‌.ಎಂ. ಸುನೀತಾ ಅವರ ಮನೆಗೆ ಈ ದಾಳಿ ನಡೆಸಿದೆ. ಸುಮಾರು ಎಂಟು ಮಂದಿ ಆಧಿಕಾರಿಗಳು, ಹಲವಾರು ವಾಹನಗಳಲ್ಲಿ ಆಗಮಿಸಿ ದಾಳಿ ಮಾಡಿ ಮಾಡಿದ್ದಾರೆ.

ಬಾಗ್ಮನೆ ಹೆಸರಿನಲ್ಲಿರುವ ನಿವಾಸ ಇದಾಗಿದ್ದು, ಈ ಮನೆಯಲ್ಲದೇ, ಬಾಗ್ಮನೆ ಬಿಲ್ಡರ್ಸ್‌ ಕಚೇರಿಗಳ ಮೇಲೂ ಆದಾಯ ತೆರಿಗೆ ಅಧಿಕಾರಿಗಳು ಲಗ್ಗೆ ಇಟ್ಟಿದ್ದಾರೆ. ಇದೇ ಈ ಕುಟುಂಬಕ್ಕೆ ಸೇರಿದ ಟ್ರಾನ್ ಇನ್ಸೈನಿಯಾ ಅಪಾರ್ಟ್ಮೆಂಟ್ ಮೇಲೆಯೂ ದಾಳಿ ಮಾಡಲಾಗಿದೆ. ಆದಾಯ ತೆರಿಗೆ ಅಧಿಕಾರಿಗಳು ಕಳೆದ ಎರಡು ದಿನಗಳಿಂದ ತಪಾಸಣೆ ನಡೆಸುತ್ತಿದ್ದು, ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಇದು ಯಾವ ಕಾರಣಕ್ಕೆ ನಡೆದ ದಾಳಿ, ಇದಕ್ಕೂ ಚುನಾವಣೆಗೂ ಸಂಬಂಧವಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ.

About Author

Leave a Reply

Your email address will not be published. Required fields are marked *

You may have missed