ಕಾಂಗ್ರೆಸ್, ಜೆಡಿಎಸ್ ತೊರೆದು ಕೆಲ ನಾಯಕರು ಬಿಜೆಪಿಗೆ ಬರಲಿದ್ದಾರೆ: MLC ರವಿಕುಮಾರ್
ಯಾದಗಿರಿ: ಈಗ ಇರುವ ಬಿಜೆಪಿ ಶಾಸಕರಲ್ಲಿ ನಾಲ್ಕಾರು ಜನಕ್ಕೆ ಟಿಕೆಟ್ ಕಟ್ ಆಗಬಹುದು ಎಂಬ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೇಳಿಕೆಗೆ ವಿಪರೀತ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಅವರು ಇದನ್ನು ಸಹಜವಾಗಿಯೇ ಹೇಳಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಎನ್.
ರವಿಕುಮಾರ್ (N Ravikumar) ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು (BS Yediyurappa) ನಾಲ್ಕಾರು ಜನಕ್ಕೆ ಟಿಕೆಟ್ ಕಟ್ ಆಗಬಹುದು ಎಂದು ಹೇಳಿದ್ದಾರೆ. ಇಂಥವರಿಗೇ ಸೀಟ್ ಸಿಗುವುದಿಲ್ಲ ಎಂದು ಹೇಳಿಲ್ಲ. ಕೆಲವರು ಈ ಬಾರಿ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಬಹುದು. ಹೀಗಾಗಿ ನಮ್ಮ ರಾಜ್ಯದಲ್ಲಿ ನಾಲ್ಕಾರು ಸೀಟ್ ಸಿಗದೇ ಇರಬಹುದು. ಅದರ ಅರ್ಥ ಅರ್ಧದಷ್ಟು ಹಾಲಿ ಶಾಸಕರಿಗೆ ಟಿಕೆಟ್ ಸಿಗುವುದಿಲ್ಲ ಎಂದು ಅಲ್ಲ. ಈ ಬಗ್ಗೆ ನಮ್ಮ ಶಾಸಕರಿಗೆ ಯಾವುದೇ ಸಂದೇಹ ಬೇಡ. ಜನಾದೇಶ ಹೊಂದಿರುವ ಶಾಸಕರು ಯಾರೂ ಆತಂಕ ಪಡುವುದು ಬೇಡ ಎಂದರು.