ಕೇರ್ ಟೇಕರ್ ಆಗಿ ಕೆಲಸ ಮಾಡಿಕೊಂಡು ಮನೆ ದೋಚಿದ್ದ ಆರೋಪಿ ಅರೆಸ್ಟ್..!

0

ಬೆಂಗಳೂರು: ಕೇರ್ ಟೇಕರ್ ಆಗಿ‌ ಕೆಲಸ ಮಾಡಿಕೊಂಡು ಮನೆ ದೋಚಿದ್ದ ಆರೋಪಿಯನ್ನು ಆರ್ ಆರ್ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಸವರಾಜ್ ದ್ಯಾಮಣ್ಣ ವಡ್ಡರ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಆರೋಪಿಯು, ಆರ್ ಆರ್ ನಗರದ ಕುಲಕರ್ಣಿ ಎಂಬುವವರ ಮನೆಯಲ್ಲಿ ಕೇರ್ ಟೇಕರ್ ಆಗಿ ಕೆಲಸ ಮಾಡುತ್ತಿದ್ದ.

ಅದರಂತೆ ಒಂದು ದಿನ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯಲ್ಲಿದ್ದ ಚಿನ್ನಾಭರಣ,

ವಜ್ರದ ಆಭರಣಗಳನ್ನು ದೋಚಿ ಎಸ್ಕೇಪ್ ಆಗಿದ್ದ. ನಂತರ ಇಲ್ಲದ ಕಾರಣ ಹೇಳಿ ಕೆಲಸ ಬಿಟ್ಟು ತೆರಳಿದ್ದ. ಮನೆಯವರು ಚೆಕ್ ಮಾಡಿದಾಗ ಕಳ್ಳತನ ಬೆಳಕಿಗೆ ಬಂದಿದ್ದು, ಕೂಡಲೇ ಆರ್ ಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ತನಿಖೆ ಕೈಗೊಂಡ ಪೊಲೀಸರು, ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತನಿಂದ 10 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿ, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

About Author

Leave a Reply

Your email address will not be published. Required fields are marked *

You may have missed