ಎಣ್ಣೆ ಏಟಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ..!
ಬೆಂಗಳೂರು: ಫೆ.7ರಂದು ಯಲಹಂಕದ ಖಾಸಗಿ ಅಸ್ಪತ್ರೆಯಲ್ಲಿ ಫಿಸಿಯೋ ಥೆರಪಿಸ್ಟ್(Physiotherapist) ಅಗಿದ್ದ ಶ್ರೀಧರ್ ಎಂಬುವವರನ್ನ ಅಪಹರಿಸಿ ಕೊಲೆಗೈದು ಸೋಲದೇವನಹಳ್ಳಿ ಬಳಿ ನಿರ್ಜನ ಪ್ರದೇಶದಲ್ಲಿ ಪೆಟ್ರೋಲ್ ಸುರಿದು ಶವವನ್ನು ಸುಟ್ಟುಹಾಕಲಾಗಿತ್ತು.
ಇದೀಗ ಒಂದು ತಿಂಗಳ ಬಳಿಕ ಆಂಧ್ರ ಮೂಲದ ಮೂವರು ಅರೋಪಿಗಳಾದ ವೀರಾಂಜನೆಯೆಲು ಅಲಿಯಾಸ್ ಪುಲಿ, ಗೋವರ್ಧನ ಅಲಿಯಾಸ್ ಡಿಜೆ, ಭಾಸ್ಕರ್ ಅಲಿಯಾಸ್ ಬುಡಪ್ಪನನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಇನ್ನು ಮೊದಲಿಗೆ ಬೆಂಕಿಯಲ್ಲಿ ಸುಟ್ಟು ಅಪರಿಚಿತ ಅನುಮಾನಾಸ್ಪದ ಸಾವು ಎಂದು ಕೇಸ್ ದಾಖಲು ಮಾಡಲಾಗಿತ್ತು. ಬಳಿಕ ತನಿಖೆ ವೇಳೆ ಅದು ವೈದ್ಯ ಶ್ರೀಧರ್ ಎಂಬುದು ಬೆಳಕಿ ಬಂದಿದೆ. ನಂತರ ಹಲವಾರು ಆಯಾಮದಿಂದ ತನಿಖೆ ಮಾಡಿದ ಬಳಿಕ ಶ್ರೀಧರ್ನನ್ನು ಕೊಲೆ ಮಾಡಿ ಸುಟ್ಟು ಹಾಕಲಾಗಿದೆ ಎಂದು ಗೊತ್ತಾಗಿದೆ. ಈ ವೇಳೆ ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಹಲವಾರು ದಿನಗಳ ಹಿಂದೆ ಬಾರ್ನಲ್ಲಿ ಆಂಧ್ರ ಮೂಲದ ಈ ಮೂರು ವ್ಯಕ್ತಿಗಳ ನಡುವೆ ನಡೆದಿದ್ದ ಒಂದು ಗಲಾಟೆ ಈ ಕೊಲೆಗೆ ಕಾರಣ ಎಂಬುದು ಗೊತ್ತಾಗಿದೆ. ಕೂಡಲೇ ಮೂವರನ್ನು ಅರೆಸ್ಟ್ ಮಾಡಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.