ಮಂಡ್ಯದಲ್ಲಿ ಈ ಬಾರಿ ಅತಿ ಹೆಚ್ಚು ಸ್ಥಾನ ಗೆದ್ದೆ ಗೆಲ್ಲುತ್ತೇವೆ: ಎನ್. ರವಿಕುಮಾರ್

0

ಬೆಂಗಳೂರು: ಮಂಡ್ಯದಲ್ಲಿ ಈ ಬಾರಿ ಅತಿ ಹೆಚ್ಚು ಸ್ಥಾನ ಗೆದ್ದೆ ಗೆಲ್ಲುತ್ತೇವೆ ಎಂದು ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಹೇಳಿದ್ದಾರೆ. ಈ ಸಂಬಂಧ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು,ಚುನಾವಣೆ ಎದುರಿಸಲು ಪಕ್ಷ ಸಿದ್ಧವಾಗಿದೆ.

ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ 4 ವಿಜಯ ಸಂಕಲ್ಪ ಯಾತ್ರೆಯನ್ನು ಮಾರ್ಚ್ ತಿಂಗಳಿನಲ್ಲಿ ಆರಂಭಿಸಲಾಗುವುದು ಎಂದರು.

ಚುನಾವಣೆ ನಡೆಯೋದು ಮಿನಿಸ್ಟರ್ ಆಧಾರದ ಮೇಲೆ ನಡೆಯೋದಿಲ್ಲ. ಮಂಡ್ಯದಲ್ಲಿ ಈ ಬಾರಿ ಅತಿ ಹೆಚ್ಚು ಸ್ಥಾನ ಗೆದ್ದೆ ಗೆಲ್ಲುತ್ತೇವೆ. ಅಮಿತ್ ಶಾ ಬಂದಾಗ ಲಕ್ಷಾಂತರ ಜನರು ಸೇರಿದ್ದರು. ಮಂಡ್ಯ ನಮಗೆ ಸವಾಲು ಅಲ್ಲ, ಅಲ್ಲಿ ಸವಾಲು ಇರೋದು ಕಾಂಗ್ರೆಸ್ ಗೆ ಅಲ್ಲಿ ನಮ್ಮ ನಾರಯಣಗೌಡ್ರು ಇದ್ದಾರೆ, ಅವರ ನೇತೃತ್ವದಲ್ಲಿ ಅಲ್ಲಿ ಗೆಲ್ಲುತ್ತೇವೆ ನಾರಯಣಗೌಡ್ರು ಜಿಲ್ಲಾ ಉಸ್ತುವಾರಿ ಬೇಡ ಅಂತೀದ್ದರಲ್ಲ ಎಂಬ ಪ್ರಶ್ನೆಗೆ, ಪಕ್ಷ ಹೇಳಿದ್ರೆ ಹೇಗೆ ಅವರೇ ಕೇಳಬೇಕು ಅಲ್ಲವೇ ಎಂದು ಮರುಪ್ರಶ್ನೆ ಹಾಕಿದರು.

About Author

Leave a Reply

Your email address will not be published. Required fields are marked *

You may have missed