ಮೀನು ಹಿಡಿಯಲು ಹೋಗಿದ್ದ ಯುವಕ ಸಾವು: ಮೃತ ದೇಹ ಪತ್ತೆ
ಆನೇಕಲ್: ಆನೇಕಲ್ ಸರ್ಜಾಪುರ ಮಹಲ್ ಚೌಡದೇನಹಳ್ಳಿ ಕೆರೆಯಲ್ಲಿ ಮೀನು ಹಿಡಿಯಲು ಹೋಗಿ 19 ವರ್ಷದ ಯುವಕ ಗೋಪಿ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಮೃತ ದೇಹ ಪತ್ತೆಯಾಗಿದೆ..ಆನೇಕಲ್ ತಾಲೂಕಿನ ಸರ್ಜಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮಹಲ್ ಚೌಡದನಹಳ್ಳಿ ಕೆರೆಯಲ್ಲಿ ಮೀನು ಹಿಡಿಯಲು ಹೋಗಿ 19 ವರ್ಷದ ಹುಡುಗ ಗೋಪಿ,
ಈಜು ಬಾರದೆ ಕೆರೆಯಲ್ಲಿ ಮುಳುಗಿ ಸಾವನಪ್ಪಿದ್ದ ನೆನ್ನೆ ಮೃತದೇಹ ಪತ್ತೆಹಚ್ಚಿಲು ತಿವ್ರ ಹುಡುಕಾಟವನ್ನು ನಡೆಸಿದರು ಆದರೆ ಮೃತ ದೇಹ ಪತ್ತೆ ಆಗಿರ್ಲಿಲ್ಲ ಇಂದು ಮದ್ಯಹ್ನ ಮೃತದೇಹ ಪತ್ತೆಹಚ್ಚುವಲ್ಲಿ ಅಗ್ನಿಶಾಮಕ ದಳ ಯಶಸ್ವಿಯಾಗಿದ್ದಾರೆ.ಇನ್ನು ಮೃತ ದೇಹವನ್ನು ಹೊರತೆಗೆದು ಶವಗಾರಕೆ ಕಳಿಸಲಾಗಿದೆ ಈ ಸಂಬಂಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.