ಒಬ್ಬ ಚಾಯ್ ವಾಲಾ ದೇಶದ ಪ್ರಧಾನಿ ಆಗಬಹುದು ಅಂತ ಬಿಜೆಪಿ ತೋರಿಸಿದೆ: ಶೋಭಾ ಕರಂದ್ಲಾಜೆ

0

ಬೆಂಗಳೂರು : ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅವರ ಮಗನಿಗೆ ಸ್ಕ್ಯಾನಿಂಗ್ ಸೆಂಟರ್‌ ನಡೆಸಲು ವ್ಯವಸ್ಥೆ ಮಾಡಿ, ಶಾಶ್ವತವಾಗಿ ಹಣ ಬರುವಂತೆ ಮಾಡಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಕ್ಟೊರಿಯಾಯದಲ್ಲಿ ಸಿದ್ದರಾಮಯ್ಯ ಮಗ ಸ್ಕಾನಿಂಗ್ ಸೆಂಟರ್ ನಡೆಸ್ತಾರೆ. ಶಾಸಕ ಆದ ಮೇಲೆ ಅವರು ಹೊರಬಂದರು. ಆದರೆ ಸಿದ್ದರಾಮಯ್ಯ ತನ್ನ ಮಗನಿಗೆ ಖಾಯಂ ಆಗಿ ದುಡ್ಡು ಬರುವಂತೆ ಮಾಡಿದ್ದರು. ಯುಟಿ ಖಾದರ್ ಆರೋಗ್ಯ ಮಂತ್ರಿಯಾಗಿದ್ದಾಗ ವಿಕ್ಟೊರಿಯಾ ಆಸ್ಪತ್ರೆಯಲ್ಲಿ ಲ್ಯಾಬ್ ನಡೆಸೋಕೆ ಅವಕಾಶ ನೀಡಿದ್ದರು. ಹಿಂದ ಎನ್ನುವ ಹೆಸರಲ್ಲಿ ನಡೆಯತ್ತೆದೆ. ಇನ್ನು ಲ್ಯಾಬ್‌ ನಡೆಸಲು ಅಂದಿನ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಮಗನ ಪರವಾಗಿ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದರು ಎಂದು ಆರೋಪಿಸಿದರು.

ದೇಶದಲ್ಲಿ ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರು ಕಾಂಗ್ರೆಸ್ ಪಕ್ಷವಾಗಿದೆ. ಹೇಳಿದ ಸುಳ್ಳನ್ನು ನೂರು ಬಾರಿ ಹೇಳಿ ಸತ್ಯ ಮಾಡೋಕೆ ಹೊರಟಿದ್ದಾರೆ. ಅನ್ನಭಾಗ್ಯ ಯೋಜನೆಯಲ್ಲಿ ಭ್ರಷ್ಟಾಚಾರ ಆಗ್ತಿತ್ತು. ಕೇಂದ್ರಕ್ಕೆ ಅನುರಾಗ್ ಠಾಕೂರು ಪತ್ರ ಬರೆದಿದ್ದರು. ಅದೇ ಅಧಿಕಾರಿ ಉತ್ತರಪ್ರದೇಶಕ್ಕೆ ರಜೆ ಮೇಲೆ ಹೋದಾಗ ಕೊಲೆ ಆಯ್ತು. ಆ ಯುವ ಅಧಿಕಾರಿ ಹೇಗೆ ಸತ್ತರು? ಯಾಕೆ ಸತ್ತರು ಎನ್ನುವುದು ಗೊತ್ತಿಲ್ಲ. ಇನ್ನು ಐಎಎಸ್‌ ಅಧಿಕಾರಿ ಡಿ.ಕೆ. ರವಿ ಹಾಗೂ ಡಿವೈಎಸ್ ಪಿ ಗಣಪತಿ ಸಾವು ಆಯ್ತು. ಆದರೆ, ಇದನ್ನು ಸಿದ್ದರಾಮಯ್ಯ ಸರ್ಕಾರ ಮುಚ್ಚಿಹಾಕಿತು ಎಂದು ಹೇಳಿದರು.

About Author

Leave a Reply

Your email address will not be published. Required fields are marked *

You may have missed