ಸಿದ್ದರಾಮಯ್ಯಗೆ ಟಿಪ್ಪು ಜಯಂತಿ ಆದ್ಮೇಲೆ ಭ್ರಮಣೆ ಆಗಿಬಿಟ್ಟದೆ: ಸಚಿವ ಆರ್ ಅಶೋಕ್

0

ಬೆಂಗಳೂರು: ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಕಂದಾಯ ಸಚಿವ ಆರ್ ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅನ್ನಬಾಗ್ಯ ನಾನೇ ಕೊಟ್ಟಿದ್ದೇನೆ ಅಂತಾರೆ. ಹಕ್ಕುಪತ್ರನೂ ನಾನು ಕೊಟ್ಟಿದ್ದೇನೆ ಅಂತಾರೆ.

ಹಂಗೆ ಮಾತಾಡೋದು ಅವರಿಗೆ ಏನೋ ಒಂಥರಾ ಚಟ. ಟಿಪ್ಪು ಜಯಂತಿ ಆದ್ಮೇಲೆ ಭ್ರಮಣೆ ಆಗಿಬಿಟ್ಟದೆ. ಏನು ಮಾಡಿದರೂ ನಾನೇ ನಾನೇ ಅಂತಾರೆ.

ಕುಕ್ಕರ್ ಬ್ಲಾಸ್ಟ್ ಬಗ್ಗೆ ಮಾತಾಡಿಸಿದರೇ ಅದನ್ನು ನಾನೇ ಮಾಡಿಸಿದ್ದು ಅಂತಾರೆ” ಎಂದು ವ್ಯಂಗ್ಯವಾಡಿದರು.ನೇಣು ಹಾಕಲು ಹಗ್ಗ ಕೊಡುತ್ತೇನೆ ಅಂದ್ರೆ ಅದನ್ನು ನಾನೇ ಕೊಟ್ಟಿದ್ದು ಅಂತಾರೆ. ಆ ಮಟ್ಟಕ್ಕೆ ಅವರು ಬಂದಿದ್ದಾರೆ. ಅವರಿಗೆ ಅಭಿವೃದ್ಧಿ ಮಾಡೋಕೆ ಆಗಿಲ್ಲ. ಈಗ ಮೋದಿ ರೈಲು ಕೊಟ್ಟವ್ರೇ, ವಿಮಾನ ನಿಲ್ದಾಣ ಕೊಟ್ಟವ್ರೇ. ಕಾಂಗ್ರೆಸ್ ಎಲ್ಲಾ ರೀತಿಯ ಆರೋಪ ಮಾಡುತ್ತಾರೆ. ಆದರೆ ಅಭಿವೃದ್ಧಿ ಬಗ್ಗೆ ಮಾತ್ರ ಮಾತಾಡಲ್ಲ. ಯಾಕೆಂದರೆ ಅವರು ಅಭಿವೃದ್ಧಿ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

About Author

Leave a Reply

Your email address will not be published. Required fields are marked *

You may have missed