ರಾಜ್ಯದಲ್ಲಿ ಬಿಸಿಗಾಳಿ ವಾತವರಣ: ಪೌರಕಾರ್ಮಿಕರಿಗೆ ಅರ್ಧದಿನ ರಜೆ ನೀಡಲು ಒತ್ತಾಯ
ಬೆಂಗಳೂರು: ರಾಜ್ಯದಲ್ಲಿ ಬಿಸಿಗಾಳಿ ವಾತಾವರಣ ಇರುವ ಹಿನ್ನೆಲೆ ಪೌರಕಾರ್ಮಿಕರಿಗೆ ಅರ್ಧದಿನ ರಜೆ ನೀಡಲು ಎಐಸಿಸಿಟಿಯು ಒತ್ತಾಯಿಸಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಸರಕಾರಕ್ಕೆ ಪತ್ರ ಬರೆದಿರುವ ಎಐಸಿಸಿಟಿಯು, ರಾಜ್ಯದಲ್ಲಿ ಬಿಸಿಗಾಳಿ ವಾತವರಣವಿರುವ ಕಾರಣ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಪೌರಕಾರ್ಮಿಕರಿಗೆ ಪ್ರತಿನಿತ್ಯ ಅರ್ಧದಿನ ರಜೆಯನ್ನು ತಕ್ಷಣದಿಂದಲೇ ಘೋಷಿಸಬೇಕು.
ಪೌರಕಾರ್ಮಿಕರಿಗೆ ಹಾಗಾಗ್ಗೆ ಕೆಲಸದಿಂದ ವಿರಾಮವನ್ನು ನೀಡಬೇಕು. ಕುಡಿಯುವ ನೀರನ್ನು ಒದಗಿಸಬೇಕು. ಓಆರ್ಎಸ್, ಮಜ್ಜಿಗೆಯನ್ನು ಪ್ರತಿನಿತ್ಯ ನೀಡಬೇಕು. ಹಾಗೆಯೇ ರಾಜ್ಯ ವಿಪತ್ತು ನಿರ್ವಹಣೆ ಸಂಸ್ಥೆಯು ಪ್ರಕಟಿಸಿದ ‘ರಾಜ್ಯ ಬಿಸಿಗಾಳಿ ಕ್ರಿಯಾ ಯೋಜನೆ-2022ಅನ್ನು ಸರಿಯಾಗಿ ಅನುಷ್ಟಾನ ಮಾಡಬೇಕು ಎಂದು ಮನವಿ ಮಾಡಿದೆ.