ಉತ್ತರ ಪ್ರದೇಶ ಮಾಡೆಲ್ ನಮ್ಮ ರಾಜ್ಯಕ್ಕೆ ಅವಶ್ಯಕತೆ ಇಲ್ಲ: ಬಿಕೆ ಹರಿಪ್ರಸಾದ್
ಬೆಂಗಳೂರು: ಪ್ರಧಾನಿ ಮೋದಿ ಅವರು ವಿಷಸರ್ಪ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಕುರಿತು ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್(BK Hariprasad) ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನ(Bangalore) ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಹಳ್ಳಿ ಭಾಷೆಯಲ್ಲಿ ಖರ್ಗೆ ಹೇಳಿದ್ದಾರಷ್ಟೇ.
ಬಿಜೆಪಿ ನಾಯಕರು ಪ್ರಚಾರದಲ್ಲಿ ವಿಷ ಕಾರ್ತಾರೆ. ಅದೇ ಅರ್ಥದಲ್ಲಿ ಖರ್ಗೆ ಹೇಳಿದ್ದು. ಸಿ.ಟಿ.ರವಿ, ಈಶ್ವರಪ್ಪ, ಯತ್ನಾಳ್ ಅವರು ತಮ್ಮ ಭಾಷಣದಲ್ಲಿ ವಿಷ ಕಾರ್ತಾರೆ. ಅದನ್ನು ಹಳ್ಳಿ ಮಾತಿನಲ್ಲಿ ಖರ್ಗೆ ಅವರು ಹೇಳಿದ್ದಾರಷ್ಟೇ. ಗೃಹ ಸಚಿವರು ಹೇಳಿದ್ರು, ಕಾಂಗ್ರೆಸ್ ಬಂದ್ರೆ ದೊಂಬಿ ಆಗುತ್ತೆ ಅಂತ. ಒಬ್ಬ ಗೃಹ ಸಚಿವರು ಹೀಗೆ ಹೇಳಬಹುದಾ? ಎಂದು ಪ್ರಶ್ನಿಸಿದರು.