ಖ್ಯಾತ ನಿರ್ಮಾಪಕ ಉಮಾಪತಿ ಕೊಲೆಗೆ ಸಂಚು ರೂಪಿಸಿದ್ದ ರೌಡಿ ಅರೆಸ್ಟ್..!
ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಪೊಲೀಸರು, ಸ್ಯಾಂಡಲ್ವುಡ್ನ ಖ್ಯಾತ ನಿರ್ಮಾಪಕ ಉಮಾಪತಿ ಕೊಲೆಗೆ ಸಂಚು ರೂಪಿಸಿದ್ದ ರೌಡಿಯೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜೇಶ್ ಅಲಿಯಾಸ್ ಕರಿಯ ರಾಜೇಶ್ ಬಂಧಿತ ರೌಡಿ ಎಂದು ಗುರುತಿಸಲಾಗಿದೆ.
ರಾಜೇಶ್, ಕುಖ್ಯಾತ ರೌಡಿ ಪರಂದಾಮ ಹಾಗೂ ಬಾಂಬೆ ರವಿಯ ಸಹಚರನಾಗಿದ್ದ. 2006 ರಿಂದ ರೌಡಿಸಂನಲ್ಲಿ ಆಕ್ಟೀವ್ ಆಗಿರುವ ರಾಜೇಶ್ ವಿರುದ್ಧ 4 ಠಾಣೆಗಳಲ್ಲಿ ಕೇಸ್ ದಾಖಲಾಗಿವೆ.
ಕೊಲೆ, ಕೊಲೆ ಯತ್ನ, ದರೊಡೆ ಸೇರಿ 10ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಹನುಮಂತ ನಗರ, ಸಿದ್ದಾಪುರ, ಕಾಟನ್ ಪೇಟೆ, ಬಸವನಗುಡಿ, ಕೆ.ಜಿ ನಗರ ಠಾಣೆಗಳಲ್ಲಿ ಕೇಸ್ ದಾಖಲಾಗಿದ್ದವು. ಈತನ ಮೇಲೆ ವಾರೆಂಟ್ ಕೂಡ ಜಾರಿಯಾಗಿತ್ತು. ಕೋರ್ಟ್ಗೆ ಹಾಜರಾಗದೇ ತಲೆ ಮರೆಸಿಕೊಂಡು ಓಡಾಡುತ್ತಿದ್ದ. ಇದೀಗ ಕೆಂಪೇಗೌಡ ಪೊಲೀಸರು ಈತನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.