ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನ ಕೊಡದೇ ಇನ್ಯಾರಿಗೆ ಕೊಡ್ತಾರೆ: ಕೆ ಎನ್ ರಾಜಣ್ಣ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಂದು ಕೆ ಎನ್ ರಾಜಣ್ಣ(KN Rajanna) ಭೇಟಿ ಮಾಡಿದ್ದಾರೆ, ಬೆಂಗಳೂರಿನ ಶಿವಾನಂದ ವೃತ್ತದ ಬಳಿಯಿರುವ ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ. ಭೇಟಿ ಬಳಿಕ ಸಿಎಂ ಆಯ್ಕೆ ವಿಚಾರವಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೆ ಎನ್ ರಾಜಣ್ಣ, ಸಿದ್ದರಾಮಯ್ಯ ಅವರಿಗೆ ಕೊಡದೇ ಇನ್ಯಾರಿಗೆ ಕೊಡ್ತಾರೆ.
ನಾನು ಸಿದ್ದರಾಯ್ಯನವರಿಗೇ ವೋಟ್ ಹಾಕಿದ್ದೀನಿ. ಇನ್ನೂ ಒಕ್ಕಲಿಗ ಸ್ವಾಮೀಜಿಗಳು ಅವರ ಅಭಿಪ್ರಾಯ ಹೇಳಿದ್ದಾರೆ.
ಸಾಮಾನ್ಯ ವ್ಯಕ್ತಿ ಕೂಡ ಸಿದ್ದರಾಮಯ್ಯ ಸಿಎಂ ಆಗಬೇಕು ಎನ್ನುತ್ತಿದ್ದಾರೆ. ಬೇರೆ ಶಾಸಕರ ಅಭಿಪ್ರಾಯ ನಂಗೆ ಗೊತ್ತಿಲ್ಲ. ನನಗೆ ಸಿದ್ದರಾಮಯ್ಯ ಅವರೇ ಸಿಎಂ ಆಗಬೇಕು ಎಂದು ಹೇಳಿದ್ದಾರೆ. ಇನ್ನೂ ಇಂದು ಬೆಳಿಗ್ಗೆ ಶಿವಾನಂದ ವೃತ್ತದ ಬಳಿಯಿರುವ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸಕ್ಕೆ ಹೆಚ್. ಸಿ.ಮಹದೇವಪ್ಪ, ಶಿವಲಿಂಗೆಗೌಡ, ರುದ್ರಪ್ಪ ಲಮಾಣಿ, ನಂಜೇಗೌಡ ಸೇರಿದಂತೆ ಇನ್ನಿತರ ಶಾಸಕರು ಆಗಮಿಸಿ ಚರ್ಚೆ ನಡೆಸಿದ್ದಾರೆ.