ರಮೇಶ್ ಎಂಬಾತನ ಕೊಲೆ ಪ್ರಕರಣ ಕೊಲೆ ಪ್ರಕರಣ ಭೇದಿಸಿದ ವಿವಿ ಪುರಂ ಪೊಲೀಸರು

0

ಬೆಂಗಳೂರು: ಬೆಂಗಳೂರಿನ (Bnaglore crime) ನ್ಯೂ ತರಗು ಪೇಟೆಯಲ್ಲಿ ನಡೆದಿದ್ದ ರಮೇಶ್ ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿ ಪುರಂ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸತೀಶ್ ಅಲಿಯಾಸ್ ಕಳಿ ಹಾಗೂ( srinivas) ಶ್ರೀನಿವಾಸ್ ಅಲಿಯಾಸ್ ಚಿನು ಬಂಧಿತರು ಎಂದು ಗುರುತಿಸಲಾಗಿದೆ.

ಆರೋಪಿಗಳು, ಬೆಂಗಳೂರಿನ ನ್ಯೂ ತರುಗು ಪೇಟೆಯಲ್ಲಿ ಮೂಟೆ ಹೊರುವ ಕೆಲಸ ಮಾಡುತ್ತಿದ್ದರು. ಇನ್ನು ಮೃತ ರಮೇಶ್​ ಮನೆ ಹಾಗೂ ತೋಟಗಳಿಗೆ ಬೃಹತ್ ಕಟ್ಟಡಗಳಿಗೆ ಗ್ರೀನ್ ಮೆಸ್ ಅಳವಡಿಸುವ ಕೆಲಸ ಮಾಡುತ್ತಿದ್ದ. ಹೀಗಿರುವಾಗ ಕಳೆದ ಮಾ. 27 ರಂದು ಮೆಟಿರಿಯಲ್ ತರಲು ಮಾಲೀಕರು ಜೆಸಿ ನಗರಕ್ಕೆ ಕಳುಹಿಸಿದ್ದರು.

ಈ ವೇಳೆ ಬಾರೊಂದಕ್ಕೆ ಕುಡಿಯಲು ರಮೇಶ್ ಹಾಗೂ ಸ್ನೇಹಿತ ಇಂದ್ರೇಶ್ ಹೋಗಿದ್ದರು. ಈ ವೇಳೆ ಆರೋಪಿಗಳು ಗಾಂಜಾ ಹೊಡೆದಿದ್ದನ್ನ ನೋಡಿ ಗಾಂಜಾ ಪೆಡ್ಲರ್ ಎಂದುಕೊಂಡಿದ್ದರು. ಅವರ ಬಳಿ ಗಾಂಜಾ ಇದೆ ಎಂದು ನ್ಯೂ ತರಗು ಪೇಟೆ ಸೆಲ್ಲಾರ್ ಒಂದರ ಬಳಿ ಹೋಗಿದ್ದರು. ಆರೋಪಿಗಳ ಬಳಿ ಹೋಗಿ 500 ರೂ ಕೊಟ್ಟು ಗಾಂಜಾ ಕೊಡುವಂತೆ ಕೇಳಿದ್ದರು. ಮೊದಲೇ ಗಾಂಜಾ ನಶೆಯಲ್ಲಿದ್ದ ಆರೋಪಿಗಳು ಗಾಂಜಾ ಇಲ್ಲ ಅಂತೇಳಿದ್ದಾರೆ. ಆದ್ರೆ ಪದೇ ಪದೇ ಗಾಂಜಾ ನೀಡುವಂತೆ ಪೀಡಿಸಿದ್ದ ರಮೇಶ್ ಹಾಗೂ ಇಂದ್ರೇಶ್. ಈ ವೇಳೆ ನಾಲ್ವರ ಮಧ್ಯೆ ಜಗಳ ಶುರುವಾಗಿ ರಮೇಶ್ ಮತ್ತು ಶ್ರೀನಿವಾಸ್ ಹಲ್ಲೆ ಮಾಡಿದ್ದಾರೆ.

About Author

Leave a Reply

Your email address will not be published. Required fields are marked *

You may have missed