ನಿರ್ಮಾಪಕ ಕುಮಾರ್ ವಿರುದ್ಧ ಸುದೀಪ್ ಅಭಿಮಾನಿಗಳ ಆಕ್ರೋಶ

0

ಬೆಂಗಳೂರು: ನಟ ಸುದೀಪ್ ಮೇಲಾಗ್ತಿರೋ ನಿರಂತರ ಆರೋಪಗಳಿಂದ ಅಖಿಲ ಕರ್ನಾಟಕ ಕಿಚ್ಚ ಸುದೀಪ್ ಅಭಿಮಾನಿಗಳ ಸಂಘ ರೊಚ್ಚಿಗೆದ್ದಿದೆ. ಕೆಲ ನಿರ್ಮಾಪಕರು ಸುದೀಪ್ ಹೆಸರನ್ನ ಕೆಡಿಸೋ ಪ್ರಯತ್ನ ಮಾಡುತ್ತಿದ್ದಾರೆ.

ವೈಯಕ್ತಿಕವಾಗಿ ಸುದೀಪ್ ವಿಚಾರದಲ್ಲಿ ದೊಡ್ಡ ಪಿತೂರಿ ನಡಿತಿದೆ.

ಇದನ್ನ ನಿಲ್ಲಿಸದೇ ಹೋದರೆ, ಅವರೆಲ್ಲರ ಮನೆಗಳ ಮುಂದೆಯೇ ಉಗ್ರ ಹೋರಾಟ ಮಾಡ್ತೀವಿ, ಧರಣಿ ಕೂರ್ತೀವಿ ಅಂತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಪತ್ರ ಕೊಟ್ಟಿದ್ದಾರೆ. ಇದನ್ನ ಫಿಲಂ ಚೇಂಬರ್ ಅಧ್ಯಕ್ಷ ಭಾ.ಮ ಹರೀಶ್ ಸ್ವೀಕರಿಸಿದ್ರು.ಸುಖಾಸುಮ್ಮನೆ ತಮ್ಮ ನೆಚ್ಚಿನ ನಟ ಸುದೀಪ್  ಅವರ ಘನತೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಸಿಡಿದೆದ್ದಿರುವ ಕಿಚ್ಚನ ಅಭಿಮಾನಿಗಳು ರಾಜ್ಯಾದ್ಯಂತ ಅಲ್ಲಲ್ಲಿ ಪ್ರತಿಭಟನೆ ಮಾಡಿದ್ದಾರೆ. ಬೆಂಗಳೂರಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮುಂದೆ ಕೆಲ ಅಭಿಮಾನಿಗಳು ಜಮಾಯಿಸಿ, ನಿರ್ಮಾಪಕರಾದ ಕುಮಾರ್ ಮತ್ತು ರೆಹಮಾನ್ ವಿರುದ್ಧ ಘೋಷಣೆ ಕೂಗಿದರು. ಕುಮಾರ್ ಅವರ ಭಾವಚಿತ್ರಕ್ಕೆ ಚೆಪ್ಪಲಿ ಸೇವೆ ಮಾಡಿದ್ದಾರೆ.

About Author

Leave a Reply

Your email address will not be published. Required fields are marked *

You may have missed